ADVERTISEMENT

ಸಿಲಿಂಡರ್‌ ಸ್ಪೋಟ; ರೆಸ್ಟೊರೆಂಟ್‌ಗೆ ಬೆಂಕಿ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2019, 14:45 IST
Last Updated 13 ಡಿಸೆಂಬರ್ 2019, 14:45 IST
ಕಮಲಾಪುರದಲ್ಲಿ ಶುಕ್ರವಾರ ರೆಸ್ಟೊರೆಂಟ್‌ಗೆ ಬೆಂಕಿ ಹೊತ್ತಿಕೊಂಡು ಧಗಧಗ ಉರಿಯಿತು
ಕಮಲಾಪುರದಲ್ಲಿ ಶುಕ್ರವಾರ ರೆಸ್ಟೊರೆಂಟ್‌ಗೆ ಬೆಂಕಿ ಹೊತ್ತಿಕೊಂಡು ಧಗಧಗ ಉರಿಯಿತು   

ಹೊಸಪೇಟೆ: ತಾಲ್ಲೂಕಿನ ಕಮಲಾಪುರ ಸಮೀಪದ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ವಸ್ತು ಸಂಗ್ರಹಾಲಯ ಬಳಿಯ ರೆಸ್ಟೊರೆಂಟ್‌ನಲ್ಲಿ ಶುಕ್ರವಾರ ಸಿಲಿಂಡರ್‌ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿದ್ದರಿಂದ ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ.

ಮೊಹಮ್ಮದ್‌ ನಾಸಿರುದ್ದೀನ್‌ ಶಾ ಎಂಬುವರಿಗೆ ಈ ರೆಸ್ಟೊರೆಂಟ್‌ ಸೇರಿದೆ. ಬೆಂಕಿಯಿಂದ ಆಹಾರ ಸಾಮಗ್ರಿ, ಕುರ್ಚಿ, ಮೇಜು ಸೇರಿದಂತೆ ಇತರೆ ವಸ್ತುಗಳು ಸಂಪೂರ್ಣ ಸುಟ್ಟು ಹೋಗಿವೆ. ಆದರೆ, ಯಾವುದೇ ಪ್ರಾಣ ಹಾನಿಯಾಗಿಲ್ಲ. ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಬಂದು ಬಳಿಕ ಬೆಂಕಿ ಬೇರೆಡೆ ಚಾಚುವುದನ್ನು ನಿಯಂತ್ರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT