ADVERTISEMENT

ಉದ್ಯೋಗಕ್ಕಾಗಿ ಏಕಾಂಗಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2020, 2:24 IST
Last Updated 8 ಸೆಪ್ಟೆಂಬರ್ 2020, 2:24 IST
ಏಕಾಂಗಿಯಾಗಿ ಪ್ರತಿಭಟಿಸಿದ ಕಿಚಿಡಿ ಪ್ರಕಾಶ್
ಏಕಾಂಗಿಯಾಗಿ ಪ್ರತಿಭಟಿಸಿದ ಕಿಚಿಡಿ ಪ್ರಕಾಶ್   

ತೋರಣಗಲ್ಲು:‘ಉದ್ಯೋಗದಿಂದ ವಜಾ ಮಾಡಿರುವ ಆದೇಶವನ್ನು ವಾಪಸ್‌ ಪಡೆದು ಮತ್ತೆಉದ್ಯೋಗ ನೀಡಬೇಕು’ ಎಂದು ಆಗ್ರಹಿಸಿಕಿಚಿಡಿ ಪ್ರಕಾಶ್ ಎಂಬುವವರು ‘ಐ ನೀಡ್ ಜಸ್ಟೀಸ್ ಫಾರ್ ಮೈ ಲೈಫ್’ ಫಲಕ ಪ್ರದರ್ಶಿಸಿ ಜಿಂದಾಲ್ ಸಂಸ್ಥೆಯ ಮುಖ್ಯ ದ್ವಾರದ ಬಳಿ ಸೋಮವಾರ ಏಕಾಂಗಿಯಾಗಿ ಧರಣಿ ನಡೆಸಿದರು.

‘ಪ್ರಕಾಶ್ ಅವರು ಧರಣಿ ನಡೆಸಲು ಅನುಮತಿ ಪಡೆದಿರಲಿಲ್ಲ. ವಿಷಯ ತಿಳಿದ ತಕ್ಷಣ ಸಿಬ್ಬಂದಿ ಸ್ಥಳಕ್ಕೆ ತೆರಳುವಷ್ಟರಲ್ಲಿ ಜಿಂದಾಲ್ ಸಂಸ್ಥೆಯವರು ಅವರನ್ನು ಒಳಕ್ಕೆ ಕರೆದೊಯ್ದಿದ್ದರು’ ಎಂದು ತೋರಣಗಲ್ಲು ಠಾಣೆಯ ಪಿಎಸ್‍ಐ ಏ.ಕಾಳಿಂಗ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT