ADVERTISEMENT

ರವಿಕುಮಾರಗೆ ‘ಕಾವ್ಯ ಕಣ್ಮಣಿ‘ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 19 ಜೂನ್ 2019, 10:51 IST
Last Updated 19 ಜೂನ್ 2019, 10:51 IST
ರವಿಕುಮಾರ ಜಾಧವ
ರವಿಕುಮಾರ ಜಾಧವ   

ಹೊಸಪೇಟೆ: ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ರವಿಕುಮಾರ ಜಾಧವ ಅವರಿಗೆ ರಾಜ್ಯಮಟ್ಟದ ’ಕಾವ್ಯ ಕಣ್ಮಣಿ‘ ಪ್ರಶಸ್ತಿ ಸಂದಿದೆ.

ಕಾವ್ಯ, ಕತೆ, ಕಾದಂಬರಿ, ವಿಮರ್ಶೆಗೆ ಸಂಬಂಧಿಸಿದಂತೆ ಒಂದು ದಶಕದಿಂದ ಅವರು ಮಾಡುತ್ತಿರುವ ಕೆಲಸವನ್ನು ಪರಿಗಣಿಸಿ ತುಮಕೂರಿನ ಸ್ನೇಹ ಸಂಗಮ ಸಾಹಿತ್ಯ ಬಳಗವು ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಿತು. ಪ್ರಶಸ್ತಿ ಪತ್ರ ಹಾಗೂ ಫಲಕ ನೀಡಿ ಅವರನ್ನು ಸನ್ಮಾನಿಸಿತು. ‘ಸೋನೆ’ ಎಂಬ ಕಾವ್ಯನಾಮದಿಂದ ರವಿಕುಮಾರ ಸಾಹಿತ್ಯ ಕೃಷಿ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT