ಹೊಸಪೇಟೆ: ಮಂಗಳವಾರ ತಡರಾತ್ರಿ ನಗರದ ಎರಡು ಪ್ರತ್ಯೇಕ ಕಡೆಗಳಲ್ಲಿ ಕಳ್ಳರು ಮನೆಯ ಬೀಗ ಮುರಿದು ಚಿನ್ನಾಭರಣ, ನಗದು ದೋಚಿಕೊಂಡು ಹೋಗಿದ್ದಾರೆ.
ನೇಕಾರ ಕಾಲೊನಿಯಲ್ಲಿ ನಟರಾಜ ಎಂಬುವರ ಮನೆಯಿಂದ 145 ಗ್ರಾಂ ಚಿನ್ನಾಭರಣ, ₹40,000 ಸಾವಿರ ನಗದು ದೋಚಿದ್ದಾರೆ. ಪಾರ್ವತಿ ನಗರದಲ್ಲಿ ನರಸಿಂಹ ಎನ್ನುವರ ಮನೆಯಲ್ಲಿದ್ದ 45 ಗ್ರಾಂ ಚಿನ್ನಾಭರಣ, ₹35,000 ನಗದು ಕಳವು ಮಾಡಿದ್ದಾರೆ.
‘ಮನೆಯ ಮಾಲೀಕರು ಮನೆಗೆ ಬೀಗ ಹಾಕಿಕೊಂಡು ಬೇರೆಡೆ ಹೋಗಿದ್ದರು. ಮನೆಯಲ್ಲಿ ಯಾರೂ ಇಲ್ಲದ್ದನ್ನು ನೋಡಿಕೊಂಡು ಕಳ್ಳರು ಈ ಕೃತ್ಯ ಎಸಗಿದ್ದಾರೆ. ಒಂದೇ ತಂಡ ಈ ಕೃತ್ಯ ಎಸಗಿದೆಯೋ ಅಥವಾ ಬೇರೆ ತಂಡ ಮಾಡಿದೆಯೋ ಎನ್ನುವುದು ಇನ್ನಷ್ಟೇ ತನಿಖೆಯಿಂದ ಗೊತ್ತಾಗಬೇಕಿದೆ’ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.
ಈ ಕುರಿತು ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.