ಹೂವಿನಹಡಗಲಿ: ತಾಲ್ಲೂಕಿನ ಹಿರೇಬನ್ನಿಮಟ್ಟಿ ಗ್ರಾಮದ ಬಳಿ ತುಂಗಭದ್ರಾ ನದಿಯಲ್ಲಿ ಮುಳುಗಿ ಇಬ್ಬರು ಶನಿವಾರ ಮೃತಪಟ್ಟಿದ್ದಾರೆ.
ಹಾವೇರಿ ಜಿಲ್ಲೆ ಕರ್ಜಗಿ ಗ್ರಾಮದ ಕೆ. ಮಲ್ಲಿಕ್ ಮಹ್ಮದ್ (9) ಮತ್ತು ಬನ್ನಿಮಟ್ಟಿ ಗ್ರಾಮದ ಲಕ್ಷ್ಮೇಶ್ವರದ ಸೋಮಣ್ಣ (54) ಸಾವಿಗೀಡಾಗಿದ್ದಾರೆ.
ಶಾಲೆಗೆ ರಜೆ ಇದ್ದುದರಿಂದ ಬಾಲಕ ಮಲ್ಲಿಕ್ ಮಹ್ಮದ್ ಬನ್ನಿಮಟ್ಟಿ ಗ್ರಾಮದ ಸಂಬಂಧಿಕರ ಮನೆಗೆ ಬಂದಿದ್ದ. ಬಟ್ಟೆ ತೊಳೆಯಲು ಮನೆಯವರೊಂದಿಗೆ ನದಿಗೆ ತೆರಳಿರುವ ಬಾಲಕ ಸ್ನಾನ ಮಾಡಲು ನದಿಗೆ ಇಳಿದಿದ್ದಾನೆ. ನದಿಯ ಆಳವಾದ ಗುಂಡಿಯಲ್ಲಿ ಬಾಲಕ ಮುಳುಗುತ್ತಿರುವುದನ್ನು ಕಂಡು ರಕ್ಷಣೆಗೆ ಧಾವಿಸಿದ ಸೋಮಣ್ಣ ನದಿಯಲ್ಲಿ ಮುಳುಗಿದ್ದಾರೆ.
ಹಿರೇಹಡಗಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.