ADVERTISEMENT

ಮತದಾರರ ಜಾಗೃತಿ ಜಾಥಾ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2019, 12:03 IST
Last Updated 13 ಸೆಪ್ಟೆಂಬರ್ 2019, 12:03 IST
ಹೊಸಪೇಟೆಯಲ್ಲಿ ಶುಕ್ರವಾರ ಮತದಾರರ ಜಾಗೃತಿ ಜಾಥಾ ನಡೆಯಿತು
ಹೊಸಪೇಟೆಯಲ್ಲಿ ಶುಕ್ರವಾರ ಮತದಾರರ ಜಾಗೃತಿ ಜಾಥಾ ನಡೆಯಿತು   

ಹೊಸಪೇಟೆ: ರಾಜ್ಯದಾದ್ಯಂತ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ನಡೆಯುತ್ತಿದ್ದು, ಅದರ ಬಗ್ಗೆ ಅರಿವು ಮೂಡಿಸಲು ಶುಕ್ರವಾರ ನಗರದಲ್ಲಿ ಜಾಗೃತಿ ಜಾಥಾ ನಡೆಸಲಾಯಿತು.

ಥಿಯೊಸಫಿಕಲ್‌ ಕಾಲೇಜಿನ ವಿದ್ಯಾರ್ಥಿನಿಯರು, ಮತದಾರರ ಜಾಗೃತಿ ವೇದಿಕೆ, ಮತದಾರರ ಸಾಕ್ಷರತಾ ಕ್ಲಬ್‌ ಸದಸ್ಯರು ಜಾಥಾದಲ್ಲಿ ಪಾಲ್ಗೊಂಡಿದ್ದರು.

ನಗರದ ಬಾಲಾ ಟಾಕೀಸ್‌ ಬಳಿಯಿಂದ ಆರಂಭಗೊಂಡ ಜಾಥಾ ಸುಣ್ಣದ ಭಟ್ಟಿ ಮುಖ್ಯರಸ್ತೆ, ಉಪರಸ್ತೆ, ಅದರ ಸಮೀಪದ ಎಲ್ಲ ಓಣಿಗಳಲ್ಲಿ ಸಂಚರಿಸಿತು. 400ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.

ADVERTISEMENT

ಪ್ರಾಚಾರ್ಯೆ ಬಿ. ಮಂಜುಳಾ,ವೇದಿಕೆಯ ನೋಡಲ್‌ ಅಧಿಕಾರಿ ಕಿಚಿಡಿ ಚನ್ನಪ್ಪ, ಪ್ರಾಧ್ಯಾಪಕರಾದ ಅನಸೂಯ ಅಂಗಡಿ, ಅಂಜಲಿ ದೇಸಾಯಿ, ಸಿ. ದಿನಮಣಿ, ಡಿ.ಎನ್. ಸುಜಾತ, ಭುವನೇಶ್ವರಿ, ಶೋಭಾ, ಬಿ. ಜೆ. ಓಂಕಾರ, ಪವನ್‍ಕುಮಾರ್, ಮಲ್ಲಿಕಾರ್ಜುನ, ರವಿಕಿರಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.