ADVERTISEMENT

ನೀರಿನಲ್ಲಿ ಮುಳುಗಿ ಬಾಲಕಿಯರ ಸಾವು

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2017, 5:19 IST
Last Updated 4 ಅಕ್ಟೋಬರ್ 2017, 5:19 IST

ಆನೇಕಲ್‌: ಹೊಂಡದಲ್ಲಿ ಮುಳುಗಿ ಇಬ್ಬರು ಬಾಲಕಿಯರು ಮೃತಪಟ್ಟಿರುವ ದಾರುಣ ಘಟನೆ ಸೋಮವಾರ ಆನೇಕಲ್ ತಾಲ್ಲೂಕಿನ ಯಡವನಹಳ್ಳಿ ಸಮೀಪದ ಹೊಂಡದಲ್ಲಿ ನಡೆದಿದೆ. ಮೃತರನ್ನು ಗೊಟ್ಟಿಗೆರೆಯ ಹರೀಶ್ ಹಾಗೂ ಮಮತಾ ದಂಪತಿ ಮಕ್ಕಳಾದ ದೀಪಿಕಾ (6) ಹಾಗೂ ಮೋನಿಕಾ (5) ಎಂದು ಗುರುತಿಸಲಾಗಿದೆ.

ವಿವರ: ಗೊಟ್ಟಿಗೆರೆಯಲ್ಲಿ ಬಟ್ಟೆ ಇಸ್ತ್ರಿ ಅಂಗಡಿ ಇಟ್ಟುಕೊಂಡಿರುವ ಹರೀಶ್ ಪತ್ನಿ ಮಮತಾ, ‘ತನ್ನ ತವರು ಮನೆಯಾದ ತಾಲೂಕಿನ ಯಡವನಹಳ್ಳಿಗೆ ತನ್ನ ಮೂವರು ಹೆಣ್ಣುಮಕ್ಕಳೊಂದಿಗೆ ದಸರಾ ರಜೆಗೆ ಬಂದಿದ್ದರು. ಬಟ್ಟೆ ಒಗೆಯಲೆಂದು ಮಮತಾ ಅವರ ತಾಯಿಯ ಜತೆ ಊರಿನ ಸಮೀಪದ ಹೊಂಡದ ಬಳಿಗೆ ತೆರಳಿದ್ದಾರೆ. ಇವರ ಜತೆ ದೀಪಿಕಾ ಹಾಗೂ ಮಮತಾ ಸಹ ಹೋಗಿದ್ದಾರೆ.

ಇನ್ನೊಂದು 2 ವರ್ಷದ ಹೆಣ್ಣು ಮಗು ಮನೆಯಲ್ಲಿ ತಾತನ ಜತೆ ಆಟವಾಡಿಕೊಂಡಿತ್ತು. ಮಮತಾ ಬಟ್ಟೆ ಒಗೆದ ಮೇಲೆ ಪಕ್ಕದ ಬಂಡೆಯ ಮೇಲೆ ಒಣಗಿಸಲು ಹೋಗಿದ್ದಾರೆ. ಈ ವೇಳೆ ನೀರಿಗಿಳಿದ ಮಕ್ಕಳು ಮುಳುಗಿ ಮೃತಪಟ್ಟಿದ್ದಾರೆ.

ADVERTISEMENT

ಬಟ್ಟೆ ಒಣಗಿ ಹಾಕಿ ಬಂದು ನೋಡುವಷ್ಟರಲ್ಲಿ ಹೊಂಡದ ಬಳಿ ಮಕ್ಕಳ ಚಪ್ಪಲಿಗಳು ಮಾತ್ರ ಇದ್ದವು. ಗಾಬರಿಗೊಂಡು ಸುತ್ತಮುತ್ತ ಹುಡುಕಾಡುವಷ್ಟರಲ್ಲಿ ಇಬ್ಬರ ಶವಗಳು ನೀರಿನಿಂದ ತೇಲಿ ಮೇಲೆ ಬಂದಿವೆ. ಇದನ್ನು ಕಂಡು ಬಾಲಕಿಯರ ತಾಯಿ ಹಾಗು ಅಜ್ಜಿ ರೋಧಿಸಿದ್ದಾರೆ. ನಂತರ ಅತ್ತಿಬೆಲೆ ಪೊಲೀಸರಿಗೆ ಮಾಹಿತಿ ನೀಡಿ ಶವಗಳನ್ನು ಹೊರತೆಗೆಯಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.