ದೊಡ್ಡಬಳ್ಳಾಪುರ: ತಾಲ್ಲೂಕಿನಲ್ಲಿ ಮಳೆ ಇಲ್ಲದೆ ಬಿತ್ತನೆ ಕುಂಠಿತವಾಗಿದೆ. ಈ ವೇಳೆಗಾಗಲೇ ಬಿತ್ತನೆ ಕೆಲಸ ಮುಕ್ತಾಯವಾಗಬೇಕಿತ್ತು. ಆದರೆ ಮಳೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ.
ಹೀಗಾಗಿ ಗ್ರಾಮದ ಹಿರಿಯರ ಸಲಹೆಯಂತೆ ಮಳೆಗಾಗಿ ಪ್ರಾರ್ಥಿಸಿ ಗ್ರಾಮಸ್ಥರೆಲ್ಲ ಸೇರಿ ಪುಟ್ಟ ಮಕ್ಕಳಿಗೆ ಸಂಪ್ರದಾಯದಂತೆ ವಿವಾಹ ಮಾಡಲಾಯಿತು ಎಂದು ಶಿವಪುರ ಗ್ರಾಮದ ನಿವಾಸಿ ಮಂಜುನಾಥ್ ತಿಳಿಸಿದ್ದಾರೆ.
ಹಿಂದೆ ಮಳೆ ಬರುವುದು ವಿಳಂಬವಾಗಿ ಬಿತ್ತನೆಗೆ ಹಿನ್ನಡೆಯಾದಾಗ, ಬೆಳೆ ಒಣಗುವ ಸಂದರ್ಭಗಳಲ್ಲಿ ಪುಟ್ಟ ಮಕ್ಕಳಿಗೆ ವಿವಾಹ ಮಾಡಲಾಗಿತ್ತು. ಆಗ ಮಳೆ ಬರುತಿತ್ತು ಎನ್ನುವ ನಂಬಿಕೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.