ADVERTISEMENT

ಸಂಭ್ರಮದ ಕೊಂಡದಮ್ಮ ಜಾತ್ರೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2014, 9:39 IST
Last Updated 3 ಮಾರ್ಚ್ 2014, 9:39 IST

ದೊಡ್ಡಬಳ್ಳಾಪುರ: ‘ಗ್ರಾಮೀಣ ಪ್ರದೇಶ­ದಲ್ಲಿ ಮಾತ್ರವೇ ಇಂದಿಗೂ ದೇಶಿ ಸಂಸ್ಕೃತಿ ಮತ್ತು ಪರಂಪರೆ ಉಳಿದಿದೆ’ ಎಂದು ಶಾಸಕ ಟಿ.ವೆಂಕಟರಮಣಯ್ಯ ತಿಳಿಸಿ­ದರು.

ತಾಲ್ಲೂಕಿನ ಮಧುರೆ ಹೋಬಳಿ ಮಾರಸಂದ್ರ ಗ್ರಾಮದಲ್ಲಿ  ಕೊಂಡದಮ್ಮ ಸೇವಾ ಸಮಿತಿ ವತಿಯಿಂದ ನಡೆದ ಜಾತ್ರಾ ಮಹೋತ್ಸವದಲ್ಲಿ ಅವರು ಮಾತ­ನಾಡಿದರು.

‘ಸಂಸ್ಕೃತಿಯ ಅಭಿವೃದ್ಧಿಗೆ ಪೂರಕ­ವಾದ ಕಾರ್ಯಕ್ರಮಗಳನ್ನು ಗ್ರಾಮೀ­ಣರು ನಡೆಸಬೇಕು’ ಎಂದು ಅವರು ತಿಳಿಸಿದರು.
ಇದೇ ವೇಳೆ ನೀರಿನ ಸಮಸ್ಯೆ ಕುರಿತು ಪ್ರಸ್ತಾಪಿಸಿದ ಅವರು, ನೀರಿನ ಬವಣೆ ನೀಗಿ­ಸಲು ತಾಲ್ಲೂಕಿನಾದ್ಯಂತ ಈಗಾ­ಗಲೇ 180 ಕೊಳವೆ ಬಾವಿಗಳನ್ನು ಕೊರೆ­ಸ­ಲಾಗಿದೆ. ಸಾರ್ವಜನಿಕರು ನೀರನ್ನು ಮಿತವಾಗಿ ಬಳಸಬೇಕು. ಸೋಮವಾರ (ಮಾ.3)ರಂದು ನಡೆಯುವ ಎತ್ತಿನ ಹೊಳೆ ಯೋಜನೆಯ ಶಂಕುಸ್ಥಾಪನೆ­ಯಲ್ಲಿ ಪಕ್ಷಾತೀತವಾಗಿ ಭಾಗವಹಿಸು­ವಂತೆ ಅವರು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ  ಜಿ.ಪಂ.ಮಾಜಿ ಅಧ್ಯಕ್ಷ ಸಿ.ಡಿ.ಸತ್ಯನಾರಾಯಣಗೌಡ, ಜಿ.ಪಂ. ಮಾಜಿ ಸದಸ್ಯ ಆರ್‌.ದಯಾ­ನಂದ ಸ್ವಾಮಿ, ಭೂ ಮಂಜೂರಾತಿ ಮಾಜಿ ಸದಸ್ಯ ಕೆ.ವಿ.ಪ್ರಕಾಶ್‌, ಆರಾಧನಾ ಸಮಿತಿ ಮಾಜಿ ಸದಸ್ಯ ಸಿದ್ದಲಿಗಸ್ವಾಮಿ, ಜಾತ್ರಾ ಮಹೋತ್ಸವದ ವ್ಯವಸ್ಥಾಪಕ ವಿರೂಪಾಕ್ಷಯ್ಯ, ಮಲ್ಲಯ್ಯ ಮತ್ತಿತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.