ADVERTISEMENT

ಏ.14 ರಂದು ಅಂಬೇಡ್ಕರ್ ದಿನಾಚರಣೆ 

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2019, 13:20 IST
Last Updated 12 ಏಪ್ರಿಲ್ 2019, 13:20 IST
ಪೂರ್ವಭಾವಿ ಸಭೆಯಲ್ಲಿ ಚಲವಾದಿ ಮುಖಂಡರು 
ಪೂರ್ವಭಾವಿ ಸಭೆಯಲ್ಲಿ ಚಲವಾದಿ ಮುಖಂಡರು    

ದೇವನಹಳ್ಳಿ: ತಾಲ್ಲೂಕು ಆಡಳಿತ ಸಂಕೀರ್ಣ ಆವರಣದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಕಂಚಿನ ಪ್ರತಿಮೆ ಬಳಿ ಏ.14 ರಂದು ಡಾ.ಬಿ.ಆರ್ ಅಂಬೇಡ್ಕರ್ ಜಯಂತಿ ಆಚರಿಸಲಾಗುವುದು ಎಂದು ಚಲವಾದಿ ಮಹಾ ಸಭಾ ತಾಲ್ಲೂಕು ಘಟಕ ಅಧ್ಯಕ್ಷ ಕೆ.ವಿ.ಸ್ವಾಮಿ ಹೇಳಿದರು .

ಇಲ್ಲಿನ ಡಿ.ಆರ್ ವಿ.ಪ್ಲಾಜಾದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಜಯಂತಿ ಆಚರಣೆ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಐದು ವರ್ಷಗಳಿಗೊಮ್ಮೆ ನಡೆಯುವ ವಿಧಾನ ಸಭೆ ಮತ್ತು ಲೋಕ ಸಭೆ ಚುನಾವಣೆ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲೆ ಅಧಿಸೂಚನೆ ಹೊರಡಿಸುವುದರಿಂದ ಅದ್ದೂರಿ ಜಯಂತಿಗೆ ಚುನಾವಣಾ ನೀತಿ ಸಂಹಿತೆ ಅಡ್ಡ ಬರುತ್ತಿದೆ. ಅಂಬೇಡ್ಕರ್ ವಿಚಾರ ಧಾರೆಗಳು, ನಡೆಸಿದ ಜೀವನ, ಅವರ ವ್ಯಕ್ತಿತ್ವ ಮತ್ತು ಸಿದ್ಧಾಂತ ಬಗ್ಗೆ ಉಪನ್ಯಾಸ ನೀಡುವಂತಿಲ್ಲ ಎಂದು ಹೇಳಿದರು.

ADVERTISEMENT

ವಾರ್ಷಿಕ ಜಯಂತಿ ಸಮಾರಂಭದಲ್ಲಿ ಪ್ರತಿಭಾವಂತರಿಗೆ ಪ್ರತಿಭಾ ಪುರಸ್ಕಾರ ಈ ಬಾರಿ ಇಲ್ಲ. ವಿವಿಧ ಕ್ಷೇತ್ರದಲ್ಲಿನ ಸಾಧಕರನ್ನು ಗೌರವಿಸುವ ವ್ಯವಸ್ಥೆ ಇರುವುದಿಲ್ಲ. ಇಂತಹ ಸಂದಿಗ್ಧ ಸ್ಥಿತಿ ಮುಂದಿನ ವರ್ಷ ಇರುವುದಿಲ್ಲ ಎಂದು ಹೇಳಿದರು.

14 ರಂದು ಬೆಳಿಗ್ಗೆ 9ಕ್ಕೆ ಪ್ರತಿಮೆ ಬಳಿ ಸೇರಿ ಪ್ರತಿಮೆಗೆ ಮಾಲಾರ್ಪಣೆ ಮಾಡಬೇಕಾಗಿದೆ. ಎಲ್ಲರು ಸಕಾಲದಲ್ಲಿ ಬಂದು ನಮನ ಸಲ್ಲಿಸಬೇಕಾಗಿದೆ ಎಂದು ಹೇಳಿದರು.

ಚಲವಾದಿ ಮುಖಂಡರಾದ ರೆಡ್ಡಿಹಳ್ಳಿ ಮುನಿರಾಜು, ಮಾರುತಿ, ಪ್ರಕಾಶ್, ಜಿ.ಸುರೇಶ್, ಜಿ.ರಮೇಶ್, ಕಾರಹಳ್ಳಿ ಕೆಂಪಣ್ಣ, ಅತ್ತಿಬೆಲೆ ನರಸಪ್ಪ, ಶ್ರೀನಿವಾಸ್ ಗಾಂಧಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.