ಹೊಸಕೋಟೆ: ಬೇಕರಿಯಲ್ಲಿ ಕ್ರೀಮ್ ಬನ್ ತಿಂದು ಬಿಲ್ ಕೇಳಿದ ಬೇಕರಿ ಸಿಬ್ಬಂದಿಯನ್ನು ಥಳಿಸಿ, ಕಬ್ಬಿಣದ ಪೈಪ್ಗಳಿಂದ ಬೇಕರಿ ವಸ್ತುಗಳನ್ನು ಧ್ವಂಸ ಮಾಡಿರುವ ಘಟನೆ ತಾಲ್ಲೂಕಿನ ನಂದಗುಡಿಯಲ್ಲಿ ಸೋಮವಾರ ನಡೆದಿದೆ.
ಕೇರಳ ಮೂಲದ ವ್ಯಕ್ತಿಗೆ ಸೇರಿದ ಬೇಕರಿಯಲ್ಲಿ ಈ ಘಟನೆ ನಡೆದಿದೆ. ಬೇಕರಿ ಮಾಲೀಕರು ನಂದಗುಡಿ ಠಾಣೆಯಲ್ಲಿ ದೂರು ನೀಡಿದ್ದಾರೆ. ಘಟನೆ ಸಂಬಂಧ ಅದೇ ಗ್ರಾಮದ ರೋಹನ್ (26), ಭರತ್ (22), ರಾಕೇಶ್ (20) ಹಾಗೂ ಗೌತಮ್(19) ಎಂಬುವವರನ್ನು ಬಂಧಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.