ದೇವನಹಳ್ಳಿ: ನಿಯಂತ್ರಣ ತಪ್ಪಿದ ಕಾರು ರಸ್ತೆಬದಿಯಿದ್ದ ಕುಶಾಲ್ ಟಿಫಿನ್ ಸೆಂಟರ್ಗೆ ನುಗ್ಗಿ ಹಾನಿಯುಂಟು ಮಾಡಿದ ಘಟನೆ ಇಲ್ಲಿನ ನಂದಿ ಬೆಟ್ಟದ ರಸ್ತೆಯಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ.
ಬೆಂಗಳೂರಿನಿಂದ ನಂದಿ ಬೆಟ್ಟಕ್ಕೆ ತೆರಳುತ್ತಿದ್ದ ಎಸ್ಟೀಮ್ ಕಾರಿನಲ್ಲಿ ರಂಜಿತ ರಾಮ್, ಅಲೀಷ್, ಸಂಗೀತಾ ಕೃಷ್ಣನ್, ತರುಣ್ರಾಜ್, ರಾಜಕುಮಾರ್, ಅನಿರುದ್ಧ್, ಶಿವಕುಮಾರ್ ಸೇರಿ ಒಟ್ಟು ಏಳು ಮಂದಿ ಇದ್ದರು. ಈ ಪೈಕಿ ಶಿವಕುಮಾರ್ ಅವರ ಎಡಗೈ ಮುರಿದಿದೆ. ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಟಿಫಿನ್ ಸೆಂಟರ್ ಮಾಲಿಕ ಮುನಿರೆಡ್ಡಿ ಮಾತನಾಡಿ, ‘ವೇಗವಾಗಿ ನುಗ್ಗಿದ ಕಾರು ರಸ್ತೆ ಪಕ್ಕದಲ್ಲಿ ಅಳವಡಿಸಿದ್ದ ನಾಮಫಲಕಕ್ಕೆ ಡಿಕ್ಕಿ ಹೊಡೆದು ಮೇಲ್ಚಾವಣಿಗೆ ಡಿಕ್ಕಿ ಹೊಡೆಯಿತು. ಚಾವಣಿ ಸಂಪೂರ್ಣ ನೆಲ ಸಮವಾಗಿದೆ. ಹತ್ತಾರು ಕುರ್ಚಿಗಳು ಪುಡಿಯಾಗಿವೆ. ತಿಂಡಿ ತಿನಿಸುಗಳ ಶೋಕೇಸ್ ಜಖಂಗೊಂಡಿದೆ. ಡಿಕ್ಕಿ ಹೊಡೆದ ಸಂದರ್ಭದಲ್ಲಿ ನಾವು ಮನೆಯ ಒಳಗೆ ಇದ್ದೆವು. ಹೊರ ಬಂದಿದ್ದರೆ ಭಾರೀ ದುರಂತ ನಡೆಯುತ್ತಿತ್ತು. ಈ ರಸ್ತೆಯಲ್ಲಿ ವೇಗಕ್ಕೆ ಕಡಿವಾಣವಿಲ್ಲ’ ಎಂದು ಘಟನೆಯನ್ನು ವಿವರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.