ಆನೇಕಲ್: ತಾಲ್ಲೂಕಿನ ಇಂಡ್ಲಬೆಲೆಯಲ್ಲಿ ಅಕ್ರಮವಾಗಿ ಕ್ಯಾಟ್ಫಿಷ್ ಸಾಕಣೆ ಹೊಂಡಗಳ ಮೇಲೆ ಕಂದಾಯ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ಹೊಂಡಗಳನ್ನು ನಾಶ ಪಡಿಸಿದ್ದಾರೆ.
ಇಂಡ್ಲಬೆಲೆಯ ವೆಂಕಟೇಶ್ ಎಂಬುವರು ತಮ್ಮ ಜಮೀನಿನಲ್ಲಿ ಹೊಂಡಗಳಲ್ಲಿ ನಿಷೇಧಿತ ಕ್ಯಾಟ್ಫಿಷ್ ಸಾಕಣೆ ಮಾಡುತ್ತಿದ್ದರು.ತಹಶೀಲ್ದಾರ್ ಸಿ.ಮಹಾದೇವಯ್ಯ ನೇತೃತ್ವದಲ್ಲಿ ಅತ್ತಿಬೆಲೆಯ ಪಿಎಸ್ಐ ಮುರಳಿ ಹಾಗೂ ಸಿಬ್ಬಂದಿ ದಾಳಿ ನಡೆಸಿ ಹೊಂಡಗಳನ್ನು ನಾಶಪಡಿಸಿದರು.
ಇಲ್ಲಿ ಸುಮಾರು₹20 ಲಕ್ಷಕ್ಕೂ ಹೆಚ್ಚು ಮೌಲ್ಯದ ಕ್ಯಾಟ್ಫಿಷ್ ಸಾಕಾಲಾಗುತ್ತಿತ್ತು ಎಂದು ತಹಶೀಲ್ದಾರ್
ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.