ADVERTISEMENT

ಸಿಲಿಂಡರ್‌ ಸ್ಫೋಟ– ಚಿನ್ನಾಭರಣ, ಸ್ವತ್ತು ನಾಶ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2019, 14:42 IST
Last Updated 2 ನವೆಂಬರ್ 2019, 14:42 IST
ಅಡುಗೆ ಅನಿಲ ಸ್ಪೋಟದಿಂದ ಹಾನಿಗೊಂಡಿರುವ ಮನೆ
ಅಡುಗೆ ಅನಿಲ ಸ್ಪೋಟದಿಂದ ಹಾನಿಗೊಂಡಿರುವ ಮನೆ   

ದೊಡ್ಡಬಳ್ಳಾಪುರ: ತಾಲ್ಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಮನೆಯಲ್ಲಿ ಇಡಲಾಗಿದ್ದ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಮನೆ ಸಂಪೂರ್ಣ ಹಾನಿಯಾಗಿದೆ.

ಹೊಸಹಳ್ಳಿ ಗ್ರಾಮದ ತೇರಿನ ಬೀದಿಯಲ್ಲಿನ ನಾಗರಾಜ್ ಅವರ ಅಡುಗೆ ಮನೆಯಲ್ಲಿದ್ದ ಸಿಲಿಂಡರ್ ಶುಕ್ರವಾರ ರಾತ್ರಿ ಸ್ಫೋಟಗೊಂಡಿದೆ. ಮನೆ ಸಂಪೂರ್ಣ ಹಾನಿಗೀಡಾಗಿದೆ. ಸಂಬಂಧಿಕರ ಮನೆಯಲ್ಲಿ ಮದುವೆ ಇದ್ದ ಕಾರಣ ಮನೆಯಲ್ಲಿ ಯಾರೂ ಇರಲಿಲ್ಲ. ಇದರಿಂದಾಗಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಸಿಲಿಂಡರ್‌ ಸ್ಫೋಟಿಸಿದ್ದರಿಂದ ಮನೆಯಲ್ಲಿಡಲಾಗಿದ್ದ ಸುಮಾರು ₹ 1.40ಲಕ್ಷ ಮೌಲ್ಯದ ಚಿನ್ನಭರಣ, ಮದುವೆಗಾಗಿ ಇಡಲಾಗಿದ್ದ ₹1.20 ಲಕ್ಷಕ್ಕೂ ಹೆಚ್ಚಿನ ನಗದು, ಜಮೀನು, ವಿಧ್ಯಾಭ್ಯಾಸ, ಪಡಿತರ ಚೀಟಿ ಸೇರಿದಂತೆ ಇತರೆ ದಾಖಲೆ ಪತ್ರಗಳು ಬೆಂಕಿಗೆ ಆಹುತಿಯಾಗಿವೆ.

ADVERTISEMENT

ಘಟನಾ ಸ್ಥಳಕ್ಕೆ ತಹಶೀಲ್ದಾರ್ ಟಿ.ಎಸ್‌.ಶಿವರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಪದ್ಮಾವತಿ ಅಣ್ಣಯ್ಯಪ್ಪ ಇದ್ದರು. ಹೊಸಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.