ADVERTISEMENT

ಬೇರೆ ಮನೆ ಮಾಡಿದ ಮಗ ಹಾಗೂ ತಂದೆ: ತಾಯಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2021, 3:51 IST
Last Updated 23 ಸೆಪ್ಟೆಂಬರ್ 2021, 3:51 IST
   

ದೊಡ್ಡಬಳ್ಳಾಪುರ: ಮಗ ಕುಟುಂಬ ತೊರೆದು ಬೇರೆ ಮನೆ ಮಾಡಿದ ಕಾರಣಕ್ಕೆ ಮನನೊಂದ ತಂದೆ, ತಾಯಿ‌ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಹಾದ್ರಿಪುರದಲ್ಲಿ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಮಾರೇಗೌಡ (58) ಮತ್ತು ಗಂಗಮ್ಮ(52) ಎಂದು ಗುರುತಿಸಲಾಗಿದೆ.

ಇಬ್ಬರು ಗಂಡು ಮಕ್ಕಳ ಪೈಕಿ ಒಬ್ಬ ಪುತ್ರ ಬೆಂಗಳೂರಿನಲ್ಲಿದ್ದು, ಕಿರಿಯ ಮಗ ತಂದೆ-ತಾಯಿಯೊಂದಿಗೆ ಇದ್ದರು. ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.

ADVERTISEMENT

ವ್ಯಕ್ತಿಯ ಶವ ಪತ್ತೆ

ತಾಲ್ಲೂಕಿನ ಚನ್ನವೀರನಹಳ್ಳಿ ಅರಣ್ಯ ಪ್ರದೇಶದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ವ್ಯಕ್ತಿಯೊಬ್ಬರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಮೃತರನ್ನು ಚನ್ನವೀರನಹಳ್ಳಿಯ ರಂಗರಾಜು(36) ಎಂದು ಗುರುತಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.