ADVERTISEMENT

ಇಂದು ಲಯನ್ಸ್‌ ಕ್ಲಬ್‌ ವತಿಯಿಂದ ಗುರುನಮನ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2020, 2:21 IST
Last Updated 27 ಸೆಪ್ಟೆಂಬರ್ 2020, 2:21 IST

ದೊಡ್ಡಬಳ್ಳಾಪುರ: ಲಯನ್ಸ್‌ ಕ್ಲಬ್‌ ಲಯನ್ಸ್‌ ಚಾರಿಟೀಸ್‌ ಟ್ರಸ್ಟ್‌, ರಂಗನಾಥ್ ಟ್ರಾಕ್ಟರ್‌ ಮತ್ತು ರಂಗನಾಥ್ ಏಜನ್ಸಿಸ್‌ ವತಿಯಿಂದ ಸೆ.27ರಂದು ಬೆಳಿಗ್ಗೆ 10.30ಕ್ಕೆ ನಗರದ ಲಯನ್ಸ್‌ ಡಯಾಲಿಸಿಸ್‌ ಆಸ್ಪತ್ರೆ ಸಭಾಂಗಣದಲ್ಲಿ ಗುರುನಮನ, ಎಂಜಿನಿಯರ್‌ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ನಡೆಯಲಿದೆ.

ಸಮಾರಂಭವನ್ನು ಲಯನ್ಸ್‌ ಕ್ಲಬ್‌ನ ಎಂ.ಜೆ.ಎಫ್‌ ಸಿ.ಕೆ.ಮನೋಹರ‌ನ್‌ ನಂಬಿಯಾರ್‌ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಲಯನ್ಸ್‌ ಕ್ಲಬ್‌ ಅಧ್ಯಕ್ಷ ಆರ್.ಎಸ್‌.ಮಂಜುನಾಥ್‌ ವಹಿಸಲಿದ್ದಾರೆ.

ಕ್ಲಬ್‌ನ ವಿವಿಧ ಪದಾಧಿಕಾರಿಗಳು, ಗಣ್ಯರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.