ADVERTISEMENT

‘ಎಲ್ಲರ ಶಾಂತಿ ಬಯಸುವ ಹಿಂದೂ ಧರ್ಮ’

​ಪ್ರಜಾವಾಣಿ ವಾರ್ತೆ
Published 15 ಜುಲೈ 2019, 13:13 IST
Last Updated 15 ಜುಲೈ 2019, 13:13 IST
ಹೊಸಕೋಟೆಯಲ್ಲಿ ವಾಗಟದ ನರೇಂದ್ರ ಅವರು ಬಚ್ಚೇಗೌಡರಿಗೆ ಬೆಳ್ಳಿಯ ಕಿರೀಟ ತೊಡಿಸಿ ಸನ್ಮಾನಿಸಿದರು. ದೇವಾಲಯದ ಅಧ್ಯಕ್ಷ ಅಬಕಾರಿ ಶ್ರೀನಿವಾಸ್, ವಾಸುದೇವಯ್ಯ, ಶರತ್ ಬಚ್ಚೇಗೌಡ ಇದ್ದರು
ಹೊಸಕೋಟೆಯಲ್ಲಿ ವಾಗಟದ ನರೇಂದ್ರ ಅವರು ಬಚ್ಚೇಗೌಡರಿಗೆ ಬೆಳ್ಳಿಯ ಕಿರೀಟ ತೊಡಿಸಿ ಸನ್ಮಾನಿಸಿದರು. ದೇವಾಲಯದ ಅಧ್ಯಕ್ಷ ಅಬಕಾರಿ ಶ್ರೀನಿವಾಸ್, ವಾಸುದೇವಯ್ಯ, ಶರತ್ ಬಚ್ಚೇಗೌಡ ಇದ್ದರು   

ಹೊಸಕೋಟೆ: ಪ್ರಪಂಚದ ಎಲ್ಲ ಧರ್ಮಗಳನ್ನು ಗೌರವದಿಂದ ಕಾಣುವ ಧರ್ಮವೆಂದರೆ ಅದು ಹಿಂದೂ ಧರ್ಮ, ಇದು ಪ್ರಪಂಚದ ಎಲ್ಲರ ಒಳಿತು ಹಾಗೂ ಶಾಂತಿಯನ್ನು ಬಯಸುತ್ತದೆ ಎಂದು ಲೋಕಸಭಾ ಸದಸ್ಯ ಬಿ.ಎನ್. ಬಚ್ಚೇಗೌಡ ತಿಳಿಸಿದರು.

ನಗರದ ಅಯ್ಯಪ್ಪಸ್ವಾಮಿ ದೇವಾಲಯದ 22ನೆಯ ಸಂಸ್ಥಾಪನಾ ದಿನದಲ್ಲಿ ಮಾತನಾಡುತ್ತಿದ್ದರು.

ಪ್ರಪಂಚದಲ್ಲಿ ಅತಿ ಹೆಚ್ಚು ಭಕ್ತರನ್ನು ಹೊಂದಿರುವ ದೇವಾಲಯಗಳಲ್ಲಿ ಶಬರಿಮಲೆ ಅಯ್ಯಪ್ಪ ದೇವಾಲಯವೂ ಒಂದು. ಪ್ರತಿ ವರ್ಷ ಲಕ್ಷಾಂತರ ಭಕ್ತರು ದೇವರ ದರ್ಶನ ಪಡೆಯುತ್ತಾರೆ. ಇಂತಹ ನಂಬಿಕೆ ಆಚಾರ ವಿಚಾರಗಳನ್ನು ಪಾಲಿಸುವುದರಿಂದ ಮನಸ್ಸಿಗೆ ನೆಮ್ಮದಿ ಜೊತೆಗೆ ಸಾರ್ಥಕತೆಯ ಮನೋಭಾವ ಮೂಡುತ್ತದೆ ಎಂದರು.

ADVERTISEMENT

ಪ್ರಧಾನಿ ನರೇಂದ್ರ ಮೋದಿ ಅವರೂ ದೇಶದ ಜನರ ಸೇವೆ ಮಾಡುವುದರಲ್ಲಿ ಸಾರ್ಥಕತೆ ಹೊಂದುತ್ತಾರೆ ಎಂದರು.

‘ದೇಶವು 5 ವರ್ಷಗಳಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು ಮುಂದಿನ ದಿನಗಳಲ್ಲಿ ಅದು ಮತ್ತಷ್ಟು ಅಭಿವೃದ್ದಿ ಪಥದತ್ತ ಸಾಗಲಿದೆ. ಲೋಕಸಭಾ ಅಧಿವೇಶನಗಳಲ್ಲಿ ಈ ಕುರಿತು ಚರ್ಚೆ ನಡೆಯುವಾಗ ಅದನ್ನು ನೋಡಿ ಮನಸ್ಸಿಗೆ ಸಂತೋಷವಾಗುತ್ತದೆ, ನನ್ನನ್ನು ಸಂಸದನ್ನಾಗಿ ಆಯ್ಕೆಮಾಡಿದ ಜನರಿಗೆ ಧನ್ಯವಾದಗಳು’ ಎಂದರು.

ದೇವಾಲಯದ ಅಧ್ಯಕ್ಷ ಅಬಕಾರಿ ಶ್ರೀನಿವಾಸ್ ಮಾತನಾಡಿ, ಪ್ರಾರಂಭದಲ್ಲಿ ರಸ್ತೆಯ ಪಕ್ಕದಲ್ಲಿ ಸಣ್ಣದಾಗಿ ಪ್ರಾರಂಭವಾದ ದೇವಾಲಯಕ್ಕೆ ಅಂದು ಅಧಿಕಾರದಲ್ಲಿದ್ದ ಬಚ್ಚೇಗೌಡರು ಒಂದು ಎಕರೆ ಜಮೀನನ್ನು ಪುರಸಭೆಯ ಮೂಲಕ ಕೊಟ್ಟರು. ಪರಿಣಾಮವಾಗಿ ಇಂದು ಈ ರೀತಿಯ ಅಭಿವೃದ್ದಿ ಸಾಧ್ಯವಾಯಿತು ಎಂದರು.

ಮುಂದಿನ ದಿನಗಳಲ್ಲಿ ದೇವಾಲಯದ ಹಿಂದಿನ ಜಾಗದಲ್ಲಿ ಸಂಸದರ ನಿಧಿಯಿಂದ ಭಕ್ತರಿಗೆ ಪ್ರಸಾದ ವಿತರಣೆಗೆ ಭವನವನ್ನು ನಿರ್ಮಿಸಿ ಕೊಡಬೇಕೆಂದು ಮನವಿ ಮಾಡಿದರು.

ವಾಗಟದ ನರೇಂದ್ರ ಅವರು ಸಂಸದರಿಗೆ ಬೆಳ್ಳಿಯ ಕಿರೀಟ ತೊಡಿಸಿ ಸನ್ಮಾನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.