ADVERTISEMENT

‘ಕೆಜಿಎಫ್’ ಅಭಿಮಾನಿಗಳಿಂದ ಅನ್ನದಾನ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2018, 12:35 IST
Last Updated 21 ಡಿಸೆಂಬರ್ 2018, 12:35 IST
ವಿಜಯಪುರದ ಗೌರಿಶಂಕರ ಚಿತ್ರಮಂದಿರದಲ್ಲಿ ಕೆ.ಜಿ.ಎಫ್ ಚಿತ್ರ ವೀಕ್ಷಣೆಗೆ ಕಿಕ್ಕಿರಿದು ಸೇರಿದ್ದ ಜನರು
ವಿಜಯಪುರದ ಗೌರಿಶಂಕರ ಚಿತ್ರಮಂದಿರದಲ್ಲಿ ಕೆ.ಜಿ.ಎಫ್ ಚಿತ್ರ ವೀಕ್ಷಣೆಗೆ ಕಿಕ್ಕಿರಿದು ಸೇರಿದ್ದ ಜನರು   

ವಿಜಯಪುರ: ಇಲ್ಲಿನ ಗೌರಿಶಂಕರ ಚಿತ್ರಮಂದಿರದಲ್ಲಿ ಚಲನಚಿತ್ರ ಕೆ.ಜಿ.ಎಫ್ ಬಿಡುಗಡೆಯಾದ ಹಿನ್ನೆಲೆಯಲ್ಲಿ ಚಿತ್ರನಟ ಯಶ್ ಅಭಿಮಾನಿಗಳು ಬೃಹತ್ ಕಟೌಟ್‌ಗಳನ್ನು ನಿಲ್ಲಿಸಿ, ಅನ್ನದಾನ ಮಾಡಿದರು.

ಇಲ್ಲಿನ ಬಸ್ ನಿಲ್ದಾಣದಲ್ಲಿ ಬೃಹತ್ ಕಟೌಟ್ ನಿಲ್ಲಿಸಿ, ಪೂಜೆ ಸಲ್ಲಿಸಿದ ನಂತರ ಜನರಿಗೆ ಅನ್ನದಾನ ಮಾಡಿದರು.

ಚಿತ್ರಮಂದಿರದ ಆವರಣದಲ್ಲಿ ಗುರುವಾರ ಕಟೌಟ್‌ಗಳನ್ನು ಕಟ್ಟಿ, ಚಿತ್ರ ಬಿಡುಗಡೆಗೆ ಶುಭ ಕೋರಿದ್ದರು. ಬೆಳಿಗ್ಗೆ ಪಟಾಕಿ ಸಿಡಿಸಿ, ಸಿಹಿ ಹಂಚಿಕೆ ಮಾಡಿ ಚಲನಚಿತ್ರ ಶತದಿನ ಪೂರೈಸಬೇಕು ಎಂದು ಹರಸಿದರು.

ADVERTISEMENT

ಚಿತ್ರಮಂದಿರವನ್ನು ಹೂಗಳಿಂದ ಅಲಂಕಾರ ಮಾಡಿದ್ದರು. ಬೆಳಿಗ್ಗೆ 7 ಗಂಟೆಗೆ ಅಭಿಮಾನಿಗಳಿಗಾಗಿ ಪ್ರದರ್ಶನ ಆಯೋಜನೆ ಮಾಡಲಾಗಿತ್ತು. ಚಿತ್ರ ವೀಕ್ಷಣೆ ಮಾಡಿದ ಅವರು, ‘ಚಿತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ. ಶತದಿನ ಕಾಣುತ್ತದೆ’ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದರು.

ಇಂದು 5 ಪ್ರದರ್ಶನಗಳು ನಡೆಯಲಿದೆ. ಜನರು, ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಿತ್ರದ ಬಗ್ಗೆ ಉತ್ತಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ ಎಂದು ಚಿತ್ರಮಂದಿರದ ವ್ಯವಸ್ಥಾಪಕ ನಾರಾಯಣಸ್ವಾಮಿ ತಿಳಿಸಿದರು.

ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಚಿತ್ರಮಂದಿರದ ಸಮೀಪದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.