ADVERTISEMENT

ಸಾಗುವಳಿ ಚೀಟಿ ಬಾಕಿ ಉಳಿಸಿಕೊಳ್ಳುವ ತಹಶಿಲ್ದಾರರ ವಿರುದ್ಧ ಕ್ರಮ: ದೇಶಪಾಂಡೆ

​ಪ್ರಜಾವಾಣಿ ವಾರ್ತೆ
Published 7 ಜೂನ್ 2019, 8:30 IST
Last Updated 7 ಜೂನ್ 2019, 8:30 IST
   

ದೊಡ್ಡಬಳ್ಳಾಪುರ: ಸಾಗುವಳಿ ಚೀಟಿಗಳನ್ನು ವಿಲೇವಾರಿ ಮಾಡದೆ ಇದ್ದರೆ ತಹಶೀಲ್ದಾರರೆ ನೇರ ಹೊಣೆಗಾರರು. ಬಾಕಿ ಉಳಿಸಿಕೊಂಡರೆ ಪಾರದರ್ಶಕತೆಯ ಬಗ್ಗೆ ಅನುಮಾನ ಮೂಡಲಿದೆ. ಇದರಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರಲಿದೆ. ಸಾಗುವಳಿ ಚೀಟಿ ಬಾಕಿ ಉಳಿಸಿಕೊಳ್ಳುವ ತಹಶಿಲ್ದಾರರ ವಿರುದ್ಧಕ್ರಮಕೈಗೊಳ್ಳಲಾಗುವುದು ಎಂದುಸಚಿವ ಆರ್.ವಿ.ದೇಶಪಾಂಡೆ ಹೇಳಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪ್ರಗತಿ ಪರಿಶೀಲನ ಸಭೆಯಲ್ಲಿ ಶುಕ್ರವಾರಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಮಳೆ ಬಂದು ಮನೆ ಹಾಳಾದರೆ 75,000 ಪರಿಹಾರವನ್ನು ತಕ್ಷಣ ವಿತರಿಸಲು ಅವಕಾಶ ಇದೆ ಎಂದರು. ಪ್ರಕೃತಿ ವಿಕೋಪದಲ್ಲಿ ಮೃತಪಟ್ಟರೆ ಐದು ಲಕ್ಷ ಪರಿಹಾರವನ್ನು ನೀಡಲು ಡಿಸಿ ಅವರಿಗೆ ಅಧಿಕಾರ ನೀಡಲಾಗಿದೆ.

ADVERTISEMENT

ಸಭೆಯಲ್ಲಿ ಸಂಸತ್ ಸದಸ್ಯ ಬಿ.ಎನ್.ಬಚ್ಚೇಗೌಡ, ಜಿ.ಪಂ.ಅಧ್ಯಕ್ಷೆ ಜಯಮ್ಮ, ಶಾಸಕ ಟಿ.ವೆಂಕಟರಮಣಯ್ಯ, ನಿಸರ್ಗ ನಾರಾಯಣಸ್ವಾಮಿ, ವಿಧಾನ ಪರಿಷತ್ ಸದಸ್ಯ ಎಸ್.ರವಿ, ಡಿಸಿ ಸಿ.ಎಸ್.ಕರೀಗೌಡ, ಸಿಇಒ ಆರ್.ಲತಾ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.