ADVERTISEMENT

ದೇವಾಲಯದ ಪುನರ್‍ ನಿರ್ಮಾಣಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2020, 13:05 IST
Last Updated 16 ಸೆಪ್ಟೆಂಬರ್ 2020, 13:05 IST
ಹೊಸಕೋಟೆ ಕೋಡಿಹಳ್ಳಿಗೆ ಭೇಟಿ ನೀಡಿದ್ದ ಮಹದೇವಪುರದ ಶಾಸಕ ಅರವಿಂದ ನಿಂಬಾವಳಿಯವರಿಗೆ ಹಿಂದೂ ರಕ್ಷಣಾ ವೇದಿಕೆ ಕಾರ್ಯಕರ್ತರು ಮನವಿ ಪತ್ರ ನೀಡಿದರು.
ಹೊಸಕೋಟೆ ಕೋಡಿಹಳ್ಳಿಗೆ ಭೇಟಿ ನೀಡಿದ್ದ ಮಹದೇವಪುರದ ಶಾಸಕ ಅರವಿಂದ ನಿಂಬಾವಳಿಯವರಿಗೆ ಹಿಂದೂ ರಕ್ಷಣಾ ವೇದಿಕೆ ಕಾರ್ಯಕರ್ತರು ಮನವಿ ಪತ್ರ ನೀಡಿದರು.   

ಹೊಸಕೋಟೆ: ತಾಲ್ಲೂಕಿನ ಕೋಡಿಹಳ್ಳಿ ಗ್ರಾಮದಲ್ಲಿ ಚೋಳರ ಕಾಲದ ಸುಮಾರು 500 ವರ್ಷಗಳ ಹಳೆಯದಾದ ಆಂಜನೇಯ ಸ್ವಾಮಿಯ ದೇವಾಲಯ ಪುನರ್‌ನಿರ್ಮಾಣ ಮಾಡಬೇಕು ಎಂದು ಕೋರಿಹಿಂದೂ ರಕ್ಷಣಾ ವೇದಿಕೆಯ ಸದಸ್ಯರು ಹಾಗೂ ಗ್ರಾಮದ ಮುಖಂಡ ಜನಾರ್ದನ್, ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ವಿಜಯ್ ಕುಮಾರ್‌ ಅವರು ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಮಹದೇವಪುರದ ಶಾಸಕ ಅರವಿಂದ ಲಿಂಬಾವಳಿ ಅವರಿಗೆ ಮನವಿ ಸಲ್ಲಿಸಿದರು.

ಇಲ್ಲಿ ದೇವಾಲಯ ಇದ್ದ ಬಗ್ಗೆ ಧಾರ್ಮಿಕ ದತ್ತಿ ಇಲಾಖೆ ಮತ್ತು ಮುಜರಾಯಿ ಇಲಾಖೆಗಳಲ್ಲಿ ದಾಖಲೆಗಳಿವೆ. ಅದನ್ನು ಪುನರ್‌ ನಿರ್ಮಿಸಲು ಅವಕಾಶ ಕೋರಿ ಗ್ರಾಮಕ್ಕೆ ಭೇಟಿ ನೀಡಿದ್ದ ಶಾಸಕರನ್ನು ಭೇಟಿ ಮಾಡಿದ ಕಾರ್ಯಕರ್ತರು ಊರಿನಲ್ಲಿದ್ದ ಪುರಾತನ ದೇವಾಲಯವನ್ನು ಕೆಲವರು ಕಳೆದ 22 ವರ್ಷಗಳ ಹಿಂದೆ ಜೀಣೋದ್ಧಾರ ಮಾಡಲು ಕೆಡವಿದ್ದು ಇಂದಿಗೂ ಅದರ ಪುನರ್‌ ನಿರ್ಮಾಣ ಆಗಿಲ್ಲದ ಕಾರಣ ತಾವು ಕೂಡಲೇ ಇದರ ಬಗ್ಗೆ ತನಿಖೆ ನಡೆಸಿ ದೇವಾಲಯವನ್ನು ನಿರ್ಮಿಸಲು ಅವಕಾಶ ಮಾಡಿಸಿಕೊಡಬೇಕು ಎಂದು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT