ADVERTISEMENT

ರೇಷ್ಮೆಇಲಾಖೆಗೆ ಸೇರಿದ ಜಾಗ ಒತ್ತುವರಿಯಾಗಿರುವ ಸಾಧ್ಯತೆ: ಕಾಂಪೌಂಡ್ ಹಾಕಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 23 ಮೇ 2023, 14:01 IST
Last Updated 23 ಮೇ 2023, 14:01 IST
 ವಿಜಯಪುರ ಪಟ್ಟಣದ ಪ್ರವಾಸಿಮಂದಿರದ ಪಕ್ಕದಲ್ಲಿರುವ ರೇಷ್ಮೆ ಇಲಾಖೆಗೆ ಸೇರಿದ ಭೂಮಿಗೆ ಕಾಂಪೌಂಡ್ ಇಲ್ಲದಿರುವುದು 
 ವಿಜಯಪುರ ಪಟ್ಟಣದ ಪ್ರವಾಸಿಮಂದಿರದ ಪಕ್ಕದಲ್ಲಿರುವ ರೇಷ್ಮೆ ಇಲಾಖೆಗೆ ಸೇರಿದ ಭೂಮಿಗೆ ಕಾಂಪೌಂಡ್ ಇಲ್ಲದಿರುವುದು    

ವಿಜಯಪುರ (ದೇವನಹಳ್ಳಿ) ಪಟ್ಟಣದ ಪ್ರವಾಸಿಮಂದಿರದ ಪಕ್ಕದಲ್ಲಿರುವ ರೇಷ್ಮೆಇಲಾಖೆಗೆ ಸೇರಿದ ಜಾಗ ಒತ್ತುವರಿಯಾಗಿರುವ ಸಾಧ್ಯತೆಗಳಿದ್ದು, ಇಲಾಖೆಯ ಅಧಿಕಾರಿಗಳು ಭೂಮಿಯನ್ನು ಸರ್ವೆ ಮಾಡಿಸಿ, ಕಾಂಪೌಂಡ್ ನಿರ್ಮಾಣ ಮಾಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಪಟ್ಟಣದಲ್ಲಿ ಭೂಮಿಗೆ ಕೋಟ್ಯಾಂತರ ರೂಪಾಯಿಗಳ ಬೆಲೆಯಿದ್ದು, ಒತ್ತುವರಿಯಾಗುವ ಸಾಧ್ಯತೆ ಇದೆ. ಹಾಗಾಗಿ ಅನೇಕ ವರ್ಷಗಳಿಂದ ಭೂಮಿಗೆ ತಡೆಗೋಡೆ ನಿರ್ಮಿಸಲು ಆಯುಕ್ತರ ಗಮನಕ್ಕೆ ತಂದರೂ ಏನು ಪ್ರಯೋಜನವಾಗಿಲ್ಲ. ಈಗಲಾದರೂ ಕನಿಷ್ಠ ಮುಳ್ಳು ತಂತಿಯನ್ನು ಹಾಕಿ ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT