ADVERTISEMENT

ಕಪ್ಪುಪಟ್ಟಿ ಕಟ್ಟಿ ಪರೀಕ್ಷೆ ಕಾರ್ಯ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2020, 14:33 IST
Last Updated 10 ಫೆಬ್ರುವರಿ 2020, 14:33 IST
ಎಕ್ಸ್‌ ಮುನಿಷಿಪಲ್‌ ಸರ್ಕಾರಿ ಪಿಯು ಕಾಲೇಜಿನಲ್ಲಿ ಕಪ್ಪು ಪಟ್ಟಿಕಟ್ಟಿಕೊಂಡು ಮುಷ್ಕರ ನಡೆಸಿದ ಸಂಘದ ಅಧ್ಯಕ್ಷ ಸಿದ್ದೇಗೌಡ ಜೆ.ಸಿ, ಪ್ರಭಾರ ಪ್ರಾಂಶುಪಾಲ ಸಿ.ಜಗದೀಶ್‌, ಉಪನ್ಯಾಸಕರಾದ ಬಸವನಹಳ್ಳಿ ಪದ್ಮನಾಭ, ಸತ್ಯನಾರಾಯಣ, ಎಚ್‌.ವಿ. ಉಮೇಶ್‌, ಮಮತ, ವಿಮಲ, ಶೀಗಯ್ಯ, ನಾರಾಯಣಸ್ವಾಮಿ
ಎಕ್ಸ್‌ ಮುನಿಷಿಪಲ್‌ ಸರ್ಕಾರಿ ಪಿಯು ಕಾಲೇಜಿನಲ್ಲಿ ಕಪ್ಪು ಪಟ್ಟಿಕಟ್ಟಿಕೊಂಡು ಮುಷ್ಕರ ನಡೆಸಿದ ಸಂಘದ ಅಧ್ಯಕ್ಷ ಸಿದ್ದೇಗೌಡ ಜೆ.ಸಿ, ಪ್ರಭಾರ ಪ್ರಾಂಶುಪಾಲ ಸಿ.ಜಗದೀಶ್‌, ಉಪನ್ಯಾಸಕರಾದ ಬಸವನಹಳ್ಳಿ ಪದ್ಮನಾಭ, ಸತ್ಯನಾರಾಯಣ, ಎಚ್‌.ವಿ. ಉಮೇಶ್‌, ಮಮತ, ವಿಮಲ, ಶೀಗಯ್ಯ, ನಾರಾಯಣಸ್ವಾಮಿ   

ಕನಕಪುರ: ವೇತನ ತಾರತಮ್ಯವನ್ನು ಸರಿಪಡಿಸುವಂತೆ ಹಾಗೂ ಕುಮಾರ್‌ ನಾಯ್ಕ್‌ ವರದಿಯನ್ನು ಸಂಪೂರ್ಣವಾಗಿ ಜಾರಿಗೊಳಿಸುವಂತೆ ಒತ್ತಾಯಿಸಿ ಕಾಲೇಜಿನ ಉಪನ್ಯಾಸಕರು ಕಪ್ಪುಪಟ್ಟಿ ಕಟ್ಟಿಕೊಂಡು ಸೋಮವಾರ ಪರೀಕ್ಷಾ ಕಾರ್ಯ ನಿರ್ವಹಿಸಿದರು.

ಪ್ರಸ್ತುತ ಪ್ರಥಮ ಪಿ.ಯು.ಸಿ ಪರೀಕ್ಷೆಯು ಪ್ರಾರಂಭಗೊಂಡಿದ್ದು ಎಲ್ಲ‌ ಪಿಯು ಕಾಲೇಜುಗಳಲ್ಲಿ ಪರೀಕ್ಷೆ ನಡೆಯುತ್ತಿದೆ. ಕನಕಪುರ ತಾಲ್ಲೂಕು ಉಪನ್ಯಾಸಕರ ಸಂಘದ ಅಧ್ಯಕ್ಷ ಸಿದ್ದೇಗೌಡ ಅವರ ನೇತೃತ್ವದಲ್ಲಿ ಉಪನ್ಯಾಸಕರು ಕೈ ತೋಳಿಗೆ ಕಪ್ಪುಪಟ್ಟಿ ಕಟ್ಟಿಕೊಂಡೇ ಪರೀಕ್ಷಾ ಕೊಠಡಿಯಲ್ಲಿ ಕಾರ್ಯ ನಿರ್ವಹಿಸಿದರು.

ತಾಲ್ಲೂಕಿನ ಕೋಡಿಹಳ್ಳಿ, ಹುಣಸನಹಳ್ಳಿ, ಉಯ್ಯಂಬಳ್ಳಿ, ಸಾತನೂರು, ಚಿಕ್ಕಮುದುವಾಡಿ, ಮರಳವಾಡಿ, ಹಾರೋಹಳ್ಳಿ, ಜೈನ್‌ ಕಾಲೇಜು, ರೂರಲ್‌ ಕಾಲೇಜು, ಎಂಎಸ್‌ಎಸ್‌ ಕಾಲೇಜುಗಳಲ್ಲಿ ಅರ್ಥಶಾಸ್ತ್ರ ವಿಷಯದ ಪರೀಕ್ಷೆ ನಡೆಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.