ದೇವನಹಳ್ಳಿ: ‘ಈ ಬಾರಿಯ ವಿಧಾನ ಪರಿಷತ್ ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ದೊಡ್ಡವರೆ ಅಖಾಡಕ್ಕೆ ಇಳಿದಿದ್ದಾರೆ’ ಎಂದು ವಿಧಾನ ಪರಿಷತ್ ಚುನಾವಣೆಯ ಅಭ್ಯರ್ಥಿ ಪುಟ್ಟಣ್ಣ ಹೇಳಿದರು.
ಇಲ್ಲಿನ ಮಿನಿ ವಿಧಾನಸೌಧದ ಮತದಾನ ಕೇಂದ್ರದ ಬಳಿ ಮತದಾನ ಪ್ರಕ್ರಿಯೆ ಕುರಿತು ಬಿಜೆಪಿ ಕಾರ್ಯಕರ್ತರು ಮತ್ತು ಬೆಂಬಲಿಗ ಶಿಕ್ಷಕರಿಂದ ಮಾಹಿತಿ ಪಡೆದ ಬಳಿಕ ಅವರು ಮಾತನಾಡಿದರು.
ಮೂರು ಬಾರಿ ಆಯ್ಕೆಯಾದಾಗ ಪಕ್ಷದ ದೊಡ್ಡವರು ಕಾಲಿಡಲಿಲ್ಲ. ಶಿಕ್ಷಕರ ಬೆಂಬಲ, ಸಂಘಟಿತ ಪ್ರಯತ್ನ, ಶಿಕ್ಷಕರ ಸ್ನೇಹಿಯಾಗಿ ಕೆಲಸ ಮಾಡಿ ಆಯ್ಕೆಯಾಗಿದ್ದೆ. ಪ್ರಸ್ತುತ ನನ್ನನ್ನು ಶತಾಯಗತಾಯವಾಗಿ ಸೋಲಿಸಲು ದೊಡ್ಡ ನಾಯಕರು ಕಣಕ್ಕೆ ಇಳಿದ್ದಾರೆ ಎಂದು ಎಚ್.ಡಿ. ಕುಮಾರಸ್ವಾಮಿ ಅವರ ಹೆಸರು ಪ್ರಸ್ತಾಪಿಸದೆ
ದೂರಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.