ಹೊಸಕೋಟೆ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಹೊಸಕೋಟೆ ಶಾಖೆಗೆ ನಡೆದ ಚುನಾವಣೆಯಲ್ಲಿ ಷಡಕ್ಷರಿ ನೇತೃತ್ವದ ತಂಡ ಎಲ್ಲಾ 17 ಸ್ಥಾನಗಳಲ್ಲಿ ಜಯಿಸಿದೆ.
ಆಯ್ಕೆಯಾದ ಅಲ್ಲಾಭಕ್ಷ್ ಮಾತನಾಡಿ, ತಾಲ್ಲೂಕಿನಲ್ಲಿ ಎಲ್ಲಾ ಶಿಕ್ಷಕರು ನಮ್ಮ ತಂಡದ ಮೇಲೆ ವಿಶ್ವಾಸವಿಟ್ಟು ನಮಗೆ ಜಯ
ತಂದುಕೊಟ್ಟಿದ್ದಾರೆ ಎಂದು
ತಿಳಿಸಿದರು.
ವಿಜೇತರಾದವರು: ಉಷಾರಾಣಿ, ಅಶ್ವತ್ಥಮ್ಮ, ಬಾಲನಾರಾಯಣಮ್ಮ, ವೈ.ವಿ. ಗೀತಾ, ಎಚ್. ಲಲಿತಮ್ಮ, ಮುಸರತ್ ಅಪ್ಜಾ( ಮಹಿಳಾ ಮೀಸಲು ಕ್ಷೇತ್ರ) ಹಾಗೂ ಅಲ್ಲಾಭಕ್ಷ್, ಪಿ. ರಾಜಣ್ಣ, ಸಿ. ಅಣ್ಣಯ್ಯಪ್ಪ, ಗಂಗಾಧರಯ್ಯ, ಎಂ. ಮುನಿಸ್ವಾಮಯ್ಯ, ಶ್ರೀನಿವಾಸಪ್ಪ, ಸುಬ್ಬರಾಯಪ್ಪ, ಜಿ.ಪಿ. ನಾಗರಾಜ, ಎ.ಎನ್. ತೇಜೋರಾಂ, ವಿ. ರಾಜಕುಮಾರ್, ಟಿ. ಸೊಣ್ಣಪ್ಪ(ಸಾಮಾನ್ಯ ಕ್ಷೇತ್ರ) ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.