ADVERTISEMENT

ಸ್ಥಳೀಯ ಸಮಸ್ಯೆ ನಿವಾರಣೆಗೆ ಶ್ರಮಿಸಿ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2019, 13:44 IST
Last Updated 1 ಫೆಬ್ರುವರಿ 2019, 13:44 IST
ವಿಜಯಪುರ ಬಸವ ಕಲ್ಯಾಣಮಠದಲ್ಲಿ ಆಯೋಜಿಸಿದ್ದ ‘ಸಮುದಾಯ ಸಹಬಾಳ್ವೆ’ ಶಿಬಿರದಲ್ಲಿ ಮಹದೇವ ಸ್ವಾಮೀಜಿ ಮಾತನಾಡಿದರು
ವಿಜಯಪುರ ಬಸವ ಕಲ್ಯಾಣಮಠದಲ್ಲಿ ಆಯೋಜಿಸಿದ್ದ ‘ಸಮುದಾಯ ಸಹಬಾಳ್ವೆ’ ಶಿಬಿರದಲ್ಲಿ ಮಹದೇವ ಸ್ವಾಮೀಜಿ ಮಾತನಾಡಿದರು   

ವಿಜಯಪುರ: ಗ್ರಾಮಾಂತರ ಪ್ರದೇಶದ ಯುವಜನರು ಸ್ಥಳೀಯ ಸಮಸ್ಯೆಗಳ ಕುರಿತು ಜಾಗೃತರಾಗುವುದರ ಜತೆಗೆ ಅವುಗಳ ನಿವಾರಣೆಗಾಗಿ ಶ್ರಮಿಸುವುದು ಅಗತ್ಯ ಎಂದು ಬಸವ ಕಲ್ಯಾಣ ಮಠದ ಅಧ್ಯಕ್ಷ ಮಹದೇವಸ್ವಾಮೀಜಿ ಅಭಿಪ್ರಾಯಪಟ್ಟರು.

ಇಲ್ಲಿನ ಬಸವ ಕಲ್ಯಾಣ ಮಠದಲ್ಲಿ ಆಯೋಜಿಸಿದ್ದ ‘ಸಮುದಾಯ ಸಹಬಾಳ್ವೆ’ ಶಿಬಿರ ಉದ್ಘಾಟಿಸಿ ಮಾತನಾಡಿದರು. ಯುವಪೀಳಿಗೆಗೆ ಗ್ರಾಮೀಣ ಭಾಗದಲ್ಲಿನ ಸಮಸ್ಯೆಗಳ ಅರಿವು ಮೂಡಿಸುವ ಕೆಲಸವಾಗಬೇಕು. ಕೇವಲ ಕಾಲೇಜಿನಲ್ಲಿ ಕುಳಿತು ಕಲಿಯುವ ಜ್ಞಾನಾರ್ಜನೆಗಿಂತ ಹೊರಗಿನ ಜನರ ನೋವು, ನಲಿವು ಅರಿಯಬೇಕೆಂದು ಹೇಳಿದರು.

ಸಾಮಾಜಿಕ ಜಾಲತಾಣಗಳ ಬಳಕೆಯಿಂದ ಹೆಚ್ಚು ಅನಾಹುತಗಳಾಗುತ್ತಿವೆ. ಈ ಕುರಿತು ಜಾಗೃತಿ ಅವಶ್ಯ. ಮಕ್ಕಳಲ್ಲಿ ತಾಯಿ ಪ್ರೇಮ, ಶಿಸ್ತು, ರಾಷ್ಟ್ರಭಕ್ತಿಯಂತಹ ಮೌಲ್ಯಗಳನ್ನು ಬೆಳೆಸಬೇಕು ಎಂದು ಕಿವಿಮಾತು ಹೇಳಿದರು.

ADVERTISEMENT

ಚಿಕ್ಕಬಳ್ಳಾಪುರ ಕೆ.ವಿ.ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಪಿ.ಎನ್.ಶೇಖರ್ ಮಾತನಾಡಿ, ಶಿಕ್ಷಕರು ಸಮಾಜದ ಪರಿವರ್ತಕರು. ಆರೋಗ್ಯವಂತ ಸಮಾಜ ನಿರ್ಮಾಣ ಕಾರ್ಯದಲ್ಲಿ ಶಿಕ್ಷಕರ ಪಾತ್ರ ಮಹತ್ವವಾದದು. ಶಿಕ್ಷಕರಲ್ಲಿ ಸಮರ್ಪಣಾ ಮನೋಭಾವ ಇರಬೇಕು. ಮಕ್ಕಳ ಮಾನಸಿಕ ಸಾಮರ್ಥ್ಯ ಅರ್ಥ ಮಾಡಿಕೊಂಡು ಬೋಧನೆ ಮಾಡುವುದನ್ನು ರೂಢಿಸಿಕೊಳ್ಳಬೇಕು ಎಂದರು.

ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿ, ಶಿಕ್ಷಕರು ನವಸಮಾಜದ ನಿರ್ಮಾಣಕ್ಕೆ ಪಣತೊಡಬೇಕೆಂದು ಕಿವಿಮಾತು ಹೇಳಿದರು.

ಚಿಂತಾಮಣಿ ಗಾಯಕ ಚಂದ್ರಶೇಖರ್, ಚಿಕ್ಕಬಳ್ಳಾಪುರ ಜಿಲ್ಲಾ ಸೇವಾದಳ ಸಂಚಾಲಕ ಪ್ರಕಾಶ್ ಅವರಿಂದ ಜಾಗೃತಿ ಗೀತೆಗಳ ಗಾಯನ ನಡೆಯಿತು. ಶ್ರೀ ಕೃಷ್ಣ ಬಿ.ಎಡ್ ಕಾಲೇಜಿನ ಪ್ರಾಂಶುಪಾಲ ಆರ್.ಬಿ.ದೇಸಾಯಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.