ADVERTISEMENT

ಅಧಿಕಾರಿಗಳಿಂದ ಸ್ಥಳ ಪರಿಶೀಲನೆ

ಕೆರೆ ಅಂಗಳದಲ್ಲಿರುವ ಪೈಪ್‌ಲೈನ್‌ ಬದಲಾವಣೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 23 ಮೇ 2023, 16:08 IST
Last Updated 23 ಮೇ 2023, 16:08 IST
ದೊಡ್ಡಬಳ್ಳಾಪುರದ ನಾಗರಕೆರೆ ಅಂಗಳದಲ್ಲಿನ ಒಳಚರಂಡಿ ಪೈಪ್‌ ಲೈನ್‌ ಪರಿಶೀಲನೆ ನಂತರ ಸ್ಥಳೀಯರೊಂದಿಗೆ ಚರ್ಚೆ ನಡೆಸಿದ ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್‌ ಮಂಜುನಾಥ್‌
ದೊಡ್ಡಬಳ್ಳಾಪುರದ ನಾಗರಕೆರೆ ಅಂಗಳದಲ್ಲಿನ ಒಳಚರಂಡಿ ಪೈಪ್‌ ಲೈನ್‌ ಪರಿಶೀಲನೆ ನಂತರ ಸ್ಥಳೀಯರೊಂದಿಗೆ ಚರ್ಚೆ ನಡೆಸಿದ ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್‌ ಮಂಜುನಾಥ್‌   

ದೊಡ್ಡಬಳ್ಳಾಪುರ: ನಗರಸಭೆ ವತಿಯಿಂದ ನಾಗರಕೆರೆ ಅಂಗಳದಲ್ಲಿ ಹಾಕಲಾಗಿರುವ ಒಳಚರಂಡಿ ಪೈಪ್‌ಲೈನ್‌ಗಳನ್ನು ಬೇರೆಡೆಗೆ ಸ್ಥಳಾಂತರ ಮಾಡಬೇಕು ಎನ್ನುವ ಪರಿಸರವಾದಿಗಳ ಒತ್ತಾಯಕ್ಕೆ ಮಣಿದು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು.

ಕೆರೆ ಅಂಗಳದಲ್ಲಿ ಒಳ ಚರಂಡಿ ಪೈಪ್‌ಲೈನ್‌ ಹಾಕಿರುವುದೇ ಅವೈಜ್ಞಾನಿಕವಾಗಿದೆ. ಜೊತೆಗೆ ಅಲ್ಲೇ ಒಳಚರಂಡಿ ಚೇಂಬರ್‌ ಸಹ ನಿರ್ಮಿಸಲಾಗಿದೆ. ಈ ಚೆಂಬರ್‌ಗಳು ಕೆರೆಯಲ್ಲಿ ನೀರು ನಿಲ್ಲುವ ಹಂತಕ್ಕಿಂತಲು ತಳಮಟ್ಟದಲ್ಲಿ ಇರುವುದರಿಂದ ಕೆರೆಯ ನೀರೆಲ್ಲವು ಒಳಚರಂಡಿ ಮೂಲಕ ಹರಿದು ಹೊರ ಹೋಗುತ್ತಿವೆ. ಇದಲ್ಲದೆ ಒಳರಂಡಿ ನೀರಿನ ಪೈಪ್‌ ಬಂದ್‌ ಆದಾಗ ಹೊರಬರುವ ಕೊಳಚೆ ನೀರು ಕೆರೆಗೆ ಸೇರುತ್ತಿವೆ ಎಂದು ಕೆರೆ ಅಂಚಿನ ನಿವಾಸಿಗಳಾದ ಜಿ.ಯಲ್ಲಪ್ಪ, ರಾಮಣ್ಣ, ಯುವ ಸಂಚಲನದ ಚಿದಾನಂದ್‌ ಹಾಗೂ ಗಿರೀಶ್‌ ಮಾಹಿತಿ ನೀಡಿದ್ದಾರೆ.

ಕೆರೆ ಕಲುಷಿತವಾಗುತ್ತಿರುವುದನ್ನು ತಡೆಯುವಂತೆ ಕೋರಿ ಚೆನ್ನೈನ ಹಸಿರು ನ್ಯಾಯಮಂಡಳಿಯಲ್ಲಿ ಗಿರೀಶ್‌ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ಕೆರೆ ಅಂಗಳದಲ್ಲಿನ ಒಳಚರಂಡಿ ಪೈಪ್‌ಲೈನ್‌ ಬೇರೆಡೆಗೆ ಸ್ಥಳಾಂತರ ಮಾಡದ ಹೊರತು ಕೆರೆಯ ನೀರು ಕಳುಷಿತವಾಗುವನ್ನು ತಡೆಯಲು ಸಾಧ್ಯವೇ ಇಲ್ಲ ಎಂದು ನ್ಯಾಯಮಂಡಳಿಯ ಗಮನಕ್ಕೆ ತರಲಾಗಿದೆ.

ADVERTISEMENT

ಸ್ಥಳ ಪರಿಶೀಲನೆ ನಂತರ ಮಾಹಿತಿ ನೀಡಿದ ಸಣ್ಣ ನೀರಾವರಿ ಇಲಾಖೆಯ ಜಿಲ್ಲಾ ಹಂತದ ಅಧಿಕಾರಿ ಮಂಜುನಾಥ್‌, ಕೆರೆಗಳಲ್ಲಿನ ಪೈಪ್‌ ಲೈನ್‌ ಬದಲಾಯಿಸಲು ನಗರಸಭೆಗೆ ಸೂಚನೆ ನೀಡಲಾಗಿದೆ. ಈ ಹಿಂದೆ ಇಲಾಖೆಯ ಗಮನಕ್ಕೆ ತರದೆ ಒಳಚರಂಡಿ ಕಾಮಗಾರಿ ನಡೆಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ನಗರಸಭೆ ಕಾರ್ಯಪಾಲಕ ಎಂಜಿನಿಯರ್‌ ರಾಮೇಗೌಡ, ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್‌ ರವೀಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.