ADVERTISEMENT

ಶೌಚಾಲಯ ದುರಸ್ತಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2020, 2:49 IST
Last Updated 23 ಸೆಪ್ಟೆಂಬರ್ 2020, 2:49 IST
ವಿಜಯಪುರದ ಗಂಗಾತಾಯಿ ದೇವಾಲಯದ ಹಿಂಭಾಗದಲ್ಲಿ ಹಾಳಾಗಿರುವ ಶೌಚಾಲಯ
ವಿಜಯಪುರದ ಗಂಗಾತಾಯಿ ದೇವಾಲಯದ ಹಿಂಭಾಗದಲ್ಲಿ ಹಾಳಾಗಿರುವ ಶೌಚಾಲಯ   

ವಿಜಯಪುರ: ಇಲ್ಲಿನ ಗಾಂಧಿಚೌಕದ ಬಳಿ ಪುರಸಭೆಯಿಂದ ನಿರ್ಮಾಣ ಮಾಡಿರುವ ಶೌಚಾಲಯ ಸಂಪೂರ್ಣವಾಗಿ ಹಾಳಾಗಿದ್ದು ಅದನ್ನು ಸರಿಪಡಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಮೂತ್ರ ವಿಸರ್ಜನೆಯ ಬೇಸಿನ್‌ಗಳು ಒಡೆದು, ಕಿತ್ತುಹೋಗಿವೆ. ಇಲ್ಲಿ ನೀರಿನ ವ್ಯವಸ್ಥೆಯಿಲ್ಲದ ಕಾರಣ ಸ್ವಚ್ಚವಾಗಿಲ್ಲ. ಮೂತ್ರ ಹೊರಗೆ ಹೋಗಲು ಅವಕಾಶವಿಲ್ಲದ ಕಾರಣ ದುರ್ವಾಸನೆ ಹೆಚ್ಚಾಗಿದೆ. ಒಳಗೆ ಕಲ್ಲುಗಳು, ಪ್ಲಾಸ್ಟಿಕ್ ಕವರ್‌ಗಳು ಬಿದ್ದಿವೆ. ಸಮೀಪದಲ್ಲೆ ಗಂಗಾತಾಯಿ ದೇವಾಲಯವಿದೆ. ಇಲ್ಲಿಗೆ ಪೂಜೆಗೆ ಬರುವಂತಹ ಭಕ್ತರು ವಾಸನೆಯಿಂದಾಗಿ ಮೂಗು ಮುಚ್ಚಿಕೊಂಡು ಪೂಜೆ, ಪುನಸ್ಕಾರ ಮಾಡಿಕೊಂಡು ಹೋಗುವಂತಹ ಸ್ಥಿತಿ ನಿರ್ಮಾಣವಾಗಿದೆ. ಈ ಅವ್ಯವಸ್ಥೆ ಸರಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT