ADVERTISEMENT

ವಿಷ ಸೇವಿಸಿದ್ದ ಮಹಿಳೆ ಸಾವು 

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2019, 12:39 IST
Last Updated 12 ಸೆಪ್ಟೆಂಬರ್ 2019, 12:39 IST

ವಿಜಯಪುರ: ಭೂ ವಿವಾದದ ವಿಚಾರದಲ್ಲಿ ಹಲ್ಲೆಗೆ ಒಳಗಾಗಿದ್ದ ಮಹಿಳೆಯೊಬ್ಬರು ವಿಷ ಸೇವಿಸಿ ಬೆಂಗಳೂರಿನ ಎಂ.ಎಸ್.ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಘಟನೆ ಗುರುವಾರ ನಡೆದಿದೆ.

ಹೋಬಳಿಯ ವೆಂಕಟಗಿರಿಕೋಟೆಯ ನಿವಾಸಿ ಸರೋಜಮ್ಮ (30) ಮೃತ ಮಹಿಳೆ. ಅವರು ಭೂವಿವಾದದ ವಿಚಾರದಲ್ಲಿ ಒಂದು ವರ್ಷದಿಂದ ಭೂವಿವಾದದ ಕಾರಣದಿಂದ ಕಿರುಕುಳ ಅನುಭವಿಸುತ್ತಿದ್ದರು. ಇದರಿಂದ ನೊಂದು ಸೆ. 10ರಂದು ವಿಷ ಸೇವಿಸಿದ್ದರು ಎಂದು ಕುಟುಂಬದವರು ತಿಳಿಸಿದರು.

ಸರೋಜಮ್ಮ ಅವರ ತಂದೆ ಮುನಿವೀರಪ್ಪ ನೀಡಿದ ದೂರಿನ ಮೇಲೆ ಪ್ರಕರಣ ದಾಖಲಾಗಿದೆ ಎಂದು ಸಬ್‌ಇನ್‌ಸ್ಪೆಕ್ಟರ್ ನರೇಶ್‌ನಾಯಕ್ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.