ADVERTISEMENT

ಕೆಲಸಗಾರನನ್ನು ಥಳಿಸಿ ಎಮ್ಮೆಗಳ ಕಳವು: ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 2 ಜೂನ್ 2019, 15:38 IST
Last Updated 2 ಜೂನ್ 2019, 15:38 IST

ಬೆಳಗಾವಿ: ತಾಲ್ಲೂಕಿನ ಅಗಸಗಾ ಗ್ರಾಮದ ಹೊರವಲಯದಲ್ಲಿ ಮೇ 26ರಂದು ರಾತ್ರಿ ದನದ ಶೆಡ್‌ನಲ್ಲಿ ಮಲಗಿದ್ದ ಕೆಲಸಗಾರನ ಕೈಕಾಲು ಕಟ್ಟಿ, ಹಲ್ಲೆ ನಡೆಸಿ ಎಮ್ಮೆಗಳನ್ನು ಕಳವು ಮಾಡಿದ್ದ ಮೂವರು ಆರೋಪಿಗಳನ್ನು ಕಾಕತಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅವರಿಂದ ಎರಡು ಎಮ್ಮೆಗಳನ್ನು ವಶಕ್ಕೆ ಪಡೆಯಲಾಗಿದೆ.

ಮಣ್ಣೀಕೇರಿಯ ಶೆಟ್ಟು ರಾಮಾ ಸನದಿ, ವಿಶಾಲ ವಿಷ್ಣು ಕಲಕಾಂಬರ ಹಾಗೂ ಸಂತೋಷ ಭರಮಾ ಖಜಗೋನಟ್ಟಿ ಬಂಧಿತರು.

ಅಪ್ಪಯ್ಯ ಮಲ್ಲಪ್ಪ ಶೆಲಾರ ಹಲ್ಲೆಗೊಳಗಾದವರು. ಈ ಕುರಿತು ಶೆಡ್‌ನ ಮಾಲೀಕರಾದ ಪ್ರಿಯಾ ಪುಂಡಲೀಕ ಸೋಮನಟ್ಟಿ ದೂರು ನೀಡಿದ್ದರು. ಎಸಿಪಿ ಕೆ. ಶಿವಾರೆಡ್ಡಿ ಹಾಗೂ ಇನ್‌ಸ್ಪೆಕ್ಟರ್‌ ಎಲ್.ಎಚ್. ಗೌಂಡಿ ನೇತೃತ್ವದಲ್ಲಿ ತನಿಖೆ ನಡೆಸಿದ ಪೊಲೀಸರು, ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿ, ಕೇದನೂರ ಗ್ರಾಮದ ಅನಿಲ ರಾಜು ಗುಡಗ್ಯಾನಟ್ಟಿ ಪರಾಯಿಯಾಗಿದ್ದು, ಆತನ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶ್‌ಕುಮಾರ್‌ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.