ADVERTISEMENT

ಮಹದಾಯಿಗೆ ಆಗ್ರಹ; ತೆಲಸಂಗದಲ್ಲಿ ರಸ್ತೆ ತಡೆ

​ಪ್ರಜಾವಾಣಿ ವಾರ್ತೆ
Published 26 ಜನವರಿ 2018, 6:44 IST
Last Updated 26 ಜನವರಿ 2018, 6:44 IST

ತೆಲಸಂಗ: ಮಹದಾಯಿ ಬಿಕ್ಕಟ್ಟನ್ನು ಶೀಘ್ರವೇ ಬಗೆಹರಿಸಿ, ಉತ್ತರ ಕರ್ನಾಟಕಕ್ಕೆ ಕುಡಿಯುವ ನೀರು ಪೂರೈಸಬೇಕೆಂದು ಕರವೇ ಜಿಲ್ಲಾ ಯುವ ಘಟಕದ ಅಧ್ಯಕ್ಷ ಯುಸೂಫ್ ಮುಜಾವರ ಒತ್ತಾಯಿಸಿದರು.

ಕಳಸಾ ಬಂಡೂರಿ ನಾಲಾ ಯೋಜನೆ, ಮಹದಾಯಿ ನದಿ ನೀರಿಗಾಗಿ ಕನ್ನಡಪರ ಸಂಘಟನೆಗಳು ಕರೆ ನೀಡಿದ್ದ ರಾಜ್ಯ ಬಂದಗೆ ಬೆಂಬಲಿಸಿ ಕರವೇ ಕಾರ್ಯಕರ್ತರು ತೆಲಸಂಗ ಗ್ರಾಮದ ಅಥಣಿ– ವಿಜಯಪುರ ರಸ್ತೆ ತಡೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜನಪ್ರತಿನಿಧಿಗಳು ಒಬ್ಬರಿಗೊಬ್ಬರು ಕೆಸರೆರಚಾಟದಲ್ಲಿ ತೊಡಗುವುದನ್ನು ಬಿಟ್ಟು, ಮಹದಾಯಿ ನೀರು ತರುವಬಗ್ಗೆ ಪ್ರಯತ್ನಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಅನಿಲ ಪಾಂಗಿ, ಅಶೋಕ ಉಂಡೋಡಿ, ರಾಜು ಪರ್ನಾಕರ, ರಾಜು ಕಾರಂಡೆ, ಸುಭಾಸ್ ಖೊಬ್ರಿ, ರಾಜು ಹೊನಕಾಂಬಳೆ, ರಾಜು ಸಾಗರ, ಸುನೀಲ ಮಾದರ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.