ಬೆಳಗಾವಿ: ನಗರದಲ್ಲಿ ಮಟ್ಕಾ ಹಾಗೂ ಕಳ್ಳಬಟ್ಟಿ ಮಾರಾಟದ ಅಡ್ಡೆ ಮೇಲೆ ಪೊಲೀಸರು ನಾಲ್ಕು ಪ್ರತ್ಯೇಕ ದಾಳಿ ನಡೆಸಿ, ಒಟ್ಟು 6 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಉದ್ಯಮಬಾಗ ಠಾಣೆ ಪಿಐ ದಯಾನಂದ ಶೇಗುಣಶಿ ಹಾಗೂ ಸಿಬ್ಬಂದಿ ಮಟ್ಕಾ ಆಡುವವರ ಮೇಲೆ ದಾಳಿ ನಡೆಸಿ, ಮಹಾವೀರ ಗಲ್ಲಿಯ ರಾಜು ಲೋಹಾರ ಹಾಗೂ ಮಜಗಾವಿಯ ಜ್ಯೋತಿಬಾ ಮಾನಗಾಂವಕರ ಅವರನ್ನು ಬಂಧಿಸಿದ್ದಾರೆ. ಅವರಿಂದ ₹ 4,300 ವಶಕ್ಕೆ ಪಡೆಯಲಾಗಿದೆ.
ಗ್ರಾಮೀಣ ಠಾಣೆ ಪಿಐ ಸುನೀಲ ನಂದೇಶ್ವರ ಹಾಗೂ ಸಿಬ್ಬಂದಿ ತಾಲ್ಲೂಕಿನ ಯಳ್ಳೂರದ ಚಾಂಗಳೇಶ್ವರ ಮಂದಿರ ಹತ್ತಿರ ಮಟ್ಕಾ ಆಡುತ್ತಿದ್ದ ಕಲ್ಮೇಶ್ವರ ಗಲ್ಲಿಯ ಮಯೂರ ಕದಮ ಎನ್ನುವವರನ್ನು ವಶಕ್ಕೆ ಪಡೆದು ₹ 5,250 ಹಣ ಜಪ್ತಿ ಮಾಡಿದ್ದಾರೆ. ಬೆನಕನಹಳ್ಳಿ ಗ್ರಾಮದ ಬಸ್ ನಿಲ್ದಾಣ ಬಳಿ ಮಟ್ಕಾ ಜೂಜಾಡುತ್ತಿದ್ದ ನಾಗೇಶ ದೇಸೂರಕರ ಹಾಗೂ ಶ್ರೀಕಾಂತ ಬೆನಕೆ ಎನ್ನುವವರನ್ನು ವಶಕ್ಕೆ ಪಡೆದು ಅವರಿಂದ ₹ 4,750 ಜಪ್ತಿ ಮಾಡಿದ್ದಾರೆ.
ಉದ್ಯಮಬಾಗ ಠಾಣೆ ಪೊಲೀಸರು ಖಾನಾಪೂರ ರಸ್ತೆ ಪಕ್ಕದ ಕಳ್ಳಬಟ್ಟಿ ಮಾರುತ್ತಿದ್ದ ಆರೋಪದ ಮೇಲೆ ಉದ್ಯಮಬಾಗ ಬ್ರಹ್ಮನಗರದ ಸಂತೋಷ ಪಾಟೀಲ ಎನ್ನುವವರನ್ನು ಬಂಧಿಸಿ, 17 ಲೀಟರ್ ಕಳ್ಳಬಟ್ಟಿ ವಶಕ್ಕೆ ಪಡೆದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.