ADVERTISEMENT

ಬೆಳಗಾವಿ: ಪ್ರತ್ಯೇಕ ದಾಳಿ, 6 ಮಂದಿ ಬಂಧನ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2020, 13:17 IST
Last Updated 26 ಸೆಪ್ಟೆಂಬರ್ 2020, 13:17 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಳಗಾವಿ: ನಗರದಲ್ಲಿ ಮಟ್ಕಾ ಹಾಗೂ ಕಳ್ಳಬಟ್ಟಿ ಮಾರಾಟದ ಅಡ್ಡೆ ಮೇಲೆ ಪೊಲೀಸರು ನಾಲ್ಕು ಪ್ರತ್ಯೇಕ ದಾಳಿ ನಡೆಸಿ, ಒಟ್ಟು 6 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಉದ್ಯಮಬಾಗ ಠಾಣೆ ಪಿಐ ದಯಾನಂದ ಶೇಗುಣಶಿ ಹಾಗೂ ಸಿಬ್ಬಂದಿ ಮಟ್ಕಾ ಆಡುವವರ ಮೇಲೆ ದಾಳಿ ನಡೆಸಿ, ಮಹಾವೀರ ಗಲ್ಲಿಯ ರಾಜು ಲೋಹಾರ ಹಾಗೂ ಮಜಗಾವಿಯ ಜ್ಯೋತಿಬಾ ಮಾನಗಾಂವಕರ ಅವರನ್ನು ಬಂಧಿಸಿದ್ದಾರೆ. ಅವರಿಂದ ₹ 4,300 ವಶಕ್ಕೆ ಪಡೆಯಲಾಗಿದೆ.

ಗ್ರಾಮೀಣ ಠಾಣೆ ಪಿಐ ಸುನೀಲ ನಂದೇಶ್ವರ ಹಾಗೂ ಸಿಬ್ಬಂದಿ ತಾಲ್ಲೂಕಿನ ಯಳ್ಳೂರದ ಚಾಂಗಳೇಶ್ವರ ಮಂದಿರ ಹತ್ತಿರ ಮಟ್ಕಾ ಆಡುತ್ತಿದ್ದ ಕಲ್ಮೇಶ್ವರ ಗಲ್ಲಿಯ ಮಯೂರ ಕದಮ ಎನ್ನುವವರನ್ನು ವಶಕ್ಕೆ ಪಡೆದು ₹ 5,250 ಹಣ ಜಪ್ತಿ ಮಾಡಿದ್ದಾರೆ. ಬೆನಕನಹಳ್ಳಿ ಗ್ರಾಮದ ಬಸ್ ನಿಲ್ದಾಣ ಬಳಿ ಮಟ್ಕಾ ಜೂಜಾಡುತ್ತಿದ್ದ ನಾಗೇಶ ದೇಸೂರಕರ ಹಾಗೂ ಶ್ರೀಕಾಂತ ಬೆನಕೆ ಎನ್ನುವವರನ್ನು ವಶಕ್ಕೆ ಪಡೆದು ಅವರಿಂದ ₹ 4,750 ಜಪ್ತಿ ಮಾಡಿದ್ದಾರೆ.

ADVERTISEMENT

ಉದ್ಯಮಬಾಗ ಠಾಣೆ ಪೊಲೀಸರು ಖಾನಾಪೂರ ರಸ್ತೆ ಪಕ್ಕದ ಕಳ್ಳಬಟ್ಟಿ ಮಾರುತ್ತಿದ್ದ ಆರೋಪದ ಮೇಲೆ ಉದ್ಯಮಬಾಗ ಬ್ರಹ್ಮನಗರದ ಸಂತೋಷ ಪಾಟೀಲ ಎನ್ನುವವರನ್ನು ಬಂಧಿಸಿ, 17 ಲೀಟರ್‌ ಕಳ್ಳಬಟ್ಟಿ ವಶಕ್ಕೆ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.