ಬೆಳಗಾವಿ: ಇಲ್ಲಿನ ಸದಾಶಿವ ನಗರದ ಲಕ್ಷ್ಮಿ ಕಾಂಪ್ಲೆಕ್ಸ್ ಎದುರು ಮಂಗಳವಾರ ಬೆಳಿಗ್ಗೆ ಬೈಕ್ ಡಿಕ್ಕಿಯಾಗಿ ಆಟೊರಿಕ್ಷಾ ಪಲ್ಟಿಯಾದ ಪರಿಣಾಮ, ಮೂವರು ಶಾಲಾ ಮಕ್ಕಳು ಗಾಯಗೊಂಡರು.
ಬಿ.ಕೆ. ಕಂಗ್ರಾಳಿಯಿಂದ ವಿದ್ಯಾನಿಕೇತನ ಶಾಲೆಗೆ ಮಕ್ಕಳನ್ನು ಆಟೊರಿಕ್ಷಾದಲ್ಲಿ ಕರೆದೊಯ್ಯುವಾಗ ಘಟನೆ ನಡೆದಿದೆ. ಆಟೊರಿಕ್ಷಾದಲ್ಲಿ 6 ಮಕ್ಕಳಿದ್ದರು. ಗಾಯಗೊಂಡವರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.
‘ಘಟನೆ ಕುರಿತು ಪೋಷಕರು ದೂರು ಕೊಡಲು ಮುಂದಾಗಲಿಲ್ಲ. ಹೀಗಾಗಿ, ನಾವೇ ಕ್ರಮ ಕೈಗೊಂಡಿದ್ದೇವೆ. ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಚಾಲಕ ಮಾರುತಿ ಸುರೇಶ ಕೋಳಿ ಹಾಗೂ ಸವಾರ ಸಂತೋಷ ಪರಶುರಾಮ ಹೊನ್ನಿಮಣ್ಣಿ ವಿರುದ್ಧ ಪ್ರಕರಣ ದಾಖಲಾಗಿದೆ’ ಎಂದು ಉತ್ತರ ಸಂಚಾರ ಠಾಣೆ ಇನ್ಸ್ಪೆಕ್ಟರ್ ಆರ್.ಆರ್. ಪಾಟೀಲ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.