ADVERTISEMENT

ಕೆವಿಜಿ ಬ್ಯಾಂಕ್‌ ಶಾಖೆಯಲ್ಲಿ ಲೂಟಿಗೆ ಯತ್ನ

​ಪ್ರಜಾವಾಣಿ ವಾರ್ತೆ
Published 7 ಜುಲೈ 2022, 10:38 IST
Last Updated 7 ಜುಲೈ 2022, 10:38 IST

ಬೆಳಗಾವಿ: ಖಾನಾಪುರ ತಾಲ್ಲೂಕಿನ ಜಾಂಬೋಟಿಯಲ್ಲಿ ಗುರುವಾರ ನಸುಕಿನಲ್ಲಿ ಕೆವಿಜಿ ಬ್ಯಾಂಕ್‌ ಕಳ್ಳತನಕ್ಕೆ ಯತ್ನ ನಡೆದಿದೆ. ಬ್ಯಾಂಕಿನ ಮೊದಲ ಷಟರ್ ಮುರಿದು ಒಳನುಗ್ಗಿದ್ದ ಕಳ್ಳರು, ಲಾಕರ್ ಮುರಿಯಲು ಮುಂದಾದಾಗ ಸೈರನ್‌ ಶಬ್ದ ಮಾಡಿದೆ. ಇದರಿಂದ ಬೆಚ್ಚಿದ ದುಷ್ಕರ್ಮಿಗಳು ಪರಾರಿಯಾದರು.

ಬ್ಯಾಂಕಿನಿಂದ ಸೈರನ್‌ ಕೂಗಿದ್ದರಿಂದ ಸುತ್ತಲಿನ ಮನೆಗಳ ಜನ ಎಚ್ಚರವಾದರು. ಬ್ಯಾಂಕಿನ ಷಟರ್‌ ಮುರಿದಿದ್ದು ಕಂಡು ಪೊಲೀಸರಿಗೆ ಮಾಹಿತಿ ತಲು‍ಪಿಸಿದರು.

ಸ್ಥಳಕ್ಕೆ ಧಾವಿಸಿದ ಖಾನಾಪುರ ಇನ್‌ಸ್ಪೆಕ್ಟರ್‌ ಸುರೇಶ ಶಿಂಗಿ ಹಾಗೂ ಸಿಬ್ಬಂದಿ ಪರಿಶೀಲನೆ ನಡೆಸಿದರು. ಶ್ವಾನದಳ, ಬೆರಳಚ್ಚು ತಜ್ಞರು ಕೂಡ ಮಾಹಿತಿ ಸಂಗ್ರಹಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.