ಬೈಲಹೊಂಗಲ: 'ತ್ಯಾಗ, ಬಲಿದಾನ ಪ್ರತೀಕವಾದ ಬಕ್ರೀದ್ ಹಬ್ಬವನ್ನು ಶಾಂತಿಯುತವಾಗಿ ಆಚರಿಸಬೇಕು' ಎಂದು ಡಿವೈಎಸ್ಪಿ ವೀರಯ್ಯ ಹಿರೇಮಠ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಬಕ್ರೀದ್ ಹಬ್ಬ ಆಚರಣೆ ಕುರಿತು ಬುಧವಾರ ನಡೆದ ಶಾಂತಿಪಾಲನಾ ಸಭೆ ನೇತೃತ್ವ ವಹಿಸಿ ಮಾತನಾಡಿದರು.
'ಬಕ್ರೀದ್ ಹಬ್ಬಕ್ಕೆ ದನಕರುಗಳು ಮತ್ತು ಗೋವುಗಳ ಹತ್ಯೆ ನಿಷೇಧವಿದ್ದು, ಸರ್ಕಾರದ ಆದೇಶವನ್ನು ಎಲ್ಲರೂ ಪಾಲನೆ ಮಾಡಬೇಕು. ಸೌಹಾರ್ದತೆ ಸಂದೇಶ ಸಾರುವ ಹಬ್ಬಗಳನ್ನು ಅರ್ಥಪೂರ್ಣವಾಗಿ ಆಚರಿಸಬೇಕು' ಎಂದರು.
ಸಿಪಿಐ ಪ್ರಮೋದ ಯಲಿಗಾರ, ಉದ್ಯಮಿ ಬಾಬುಸಾಬ ಸಂಗೊಳ್ಳಿ, ಪುರಸಭೆ ಮಾಜಿ ಉಪಾಧ್ಯಕ್ಷ ಮಹಾಂತೇಶ ತುರಮರಿ, ಮಹಮ್ಮದ್ರಫೀಕ್ ನಾಯ್ಕ, ಐಜಾಜ್ ಬಾಗೇವಾಡಿ, ಆರ್.ಎ.ಅರಭಾವಿ, ಅಬ್ದುಲ್ರೆಹಮಾನ್ ಹುಬ್ಬಳ್ಳಿ, ಮಹಾಂತೇಶ ಅಕ್ಕಿ ವೇದಿಕೆಯಲ್ಲಿದ್ದರು.
ಮಹಾಂತೇಶ ಹೊಸೂರ, ಶಬ್ಬೀರ್ ಕುದರಿ, ದಾವಲಸಾಬ ಕೊಂಡಗೋಡಿ, ಅಕ್ಬರ್ ತಾಳಿಕೋಟಿ, ಕುಮಾರ ಹೂಗಾರ, ಚಂದ್ರು ಹೊಸೂರ, ಸಾಧಿಕ ಬೇಪಾರಿ, ಆಯೂಬ್ ಪಠಾಣ ಹಾಗೂ ಮುಸ್ಲಿ ಸಮಾಜ ಬಾಂಧವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.