ADVERTISEMENT

ಬೆಳಗಾವಿ| ಸಂಭಾಜಿ ಪ್ರತಿಮೆ ಅನಾವರಣ: ಶೋಭಾಯಾತ್ರೆ ಆರಂಭ

​ಪ್ರಜಾವಾಣಿ ವಾರ್ತೆ
Published 5 ಜನವರಿ 2025, 14:40 IST
Last Updated 5 ಜನವರಿ 2025, 14:40 IST
   

ಬೆಳಗಾವಿ: ಸಾಕಷ್ಟು ವಿವಾದ, ಗೊಂದಲದ ಮಧ್ಯೆಯೂ ಇಲ್ಲಿನ ಧರ್ಮವೀರ ಸಂಭಾಜಿ ವೃತ್ತದಲ್ಲಿ ಭಾನುವಾರ ರಾತ್ರಿ ನಡೆಯಲಿರುವ ಸಂಭಾಜಿ ಪ್ರತಿಮೆ ಅನಾವರಣ ಕಾರ್ಯಕ್ರಮದ ಪ್ರಯುಕ್ತ, ಶೋಭಾಯಾತ್ರೆ ಆರಂಭಗೊಂಡಿದೆ.

ಅನಗೋಳದ ದತ್ತ ಮಂದಿರದಿಂದ ಹೊರಟಿರುವ ಯಾತ್ರೆಯಲ್ಲಿ ಸಾವಿರಾರು ಮಹಿಳೆಯರು ಕುಂಭ ಹೊತ್ತು ಸಾಗುತ್ತಿದ್ದಾರೆ. ಕಲಾವಿದರು ಜಾನಪದ ಕಲಾವಿದರು ಸಂಗೀತ ವಾದ್ಯಗಳನ್ನು ನುಡಿಸಿ ಸಂಭ್ರಮಿಸುತ್ತಿದ್ದಾರೆ. ಎಲ್ಲಿ ನೋಡಿದರೂ ಕೇಸರಿ ಬಾವುಟಗಳು ರಾರಾಜಿಸುತ್ತಿವೆ. ಧ್ವನಿವರ್ಧಕಗಳ ಅಬ್ಬರ ಜೋರಾಗಿದೆ.

ಯಾತ್ರೆ ಸಾಗಲಿರುವ ಮಾರ್ಗದ ಬದಿ ಸೇರಿದ ಶ್ರೀರಾಮ ಸೇನೆ ಹಿಂದೂಸ್ತಾನ್ ಸಂಘಟನೆ ಕಾರ್ಯಕರ್ತರು, ಶಾಸಕ ಅಭಯ ಪಾಟೀಲ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ. ಹಾಗಾಗಿ ಸ್ಥಳದಲ್ಲಿ ಆತಂಕ ಮುಂದುವರಿದಿದೆ.

ADVERTISEMENT

ಯಾವುದೇ ಅಹಿತಕರ ಘಟನೆ ನಡೆಯಬಾರದೆಂದು ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.