ADVERTISEMENT

ಬಿಜೆಪಿ ಸರ್ಕಾರ ಖಚಿತ; ಶಾಸಕ ಯಾದವಾಡ

​ಪ್ರಜಾವಾಣಿ ವಾರ್ತೆ
Published 8 ಜುಲೈ 2019, 11:08 IST
Last Updated 8 ಜುಲೈ 2019, 11:08 IST
ಮಹಾದೇವಪ್ಪ ಎಸ್‌. ಯಾದವಾಡ
ಮಹಾದೇವಪ್ಪ ಎಸ್‌. ಯಾದವಾಡ   

ಬೆಳಗಾವಿ: ‘ಇನ್ನೇನು ಕೆಲವೇ ದಿನಗಳಲ್ಲಿ ಈ ಸರ್ಕಾರ ಬಿದ್ದು ಹೋಗಲಿದ್ದು, ಸದ್ಯದಲ್ಲಿಯೇ ಬಿಜೆಪಿ ಸರ್ಕಾರ ರಚನೆಯಾಗುವುದು ಖಚಿತ’ ಎಂದು ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘13 ತಿಂಗಳಾದರೂ ರಾಜ್ಯದ ಸಮ್ಮಿಶ್ರ ಸರ್ಕಾರ ಟೇಕ್‌ ಆಫ್‌ ಆಗಲೇ ಇಲ್ಲ. ಈಗ ಅವರವರಲ್ಲಿ ಕಿತ್ತಾಡಿಕೊಂಡು, ಒಬ್ಬರ ನಂತರ ಒಬ್ಬರು ರಾಜೀನಾಮೆ ನೀಡುತ್ತಿದ್ದಾರೆ. ಅಲ್ಪಮತಕ್ಕೆ ಕುಸಿಯುವ ಕಾರಣ, ಸರ್ಕಾರ ಬಿದ್ದು ಹೋಗುವುದು ನೂರಕ್ಕೆ ನೂರರಷ್ಟು ಖಚಿತ’ ಎಂದು ನುಡಿದರು.

‘ಸರ್ಕಾರವನ್ನು ಕೆಡುವಲು ನಾವ್ಯಾರೂ ಪ್ರಯತ್ನ ಪಟ್ಟಲ್ಲಿ. ಅದಾಗಿಯೇ ಬಿದ್ದು ಹೋಗುತ್ತಿದೆ. ಸರ್ಕಾರ ಅಲ್ಪಮತಕ್ಕೆ ಕುಸಿದ ನಂತರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಸರ್ಕಾರ ರಚಿಸಲು ತಮಗೆ ಅವಕಾಶ ನೀಡಬೇಕೆಂದು ರಾಜ್ಯಪಾಲರಿಗೆ ಕೋರಲಿದ್ದಾರೆ’ ಎಂದು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.