ADVERTISEMENT

ಚಿಕ್ಕೋಡಿ: ಬಾವಿಗೆ ಬಿದ್ದಿದ್ದ ಎಮ್ಮೆ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2021, 8:45 IST
Last Updated 29 ಡಿಸೆಂಬರ್ 2021, 8:45 IST
ಬಾವಿಗೆ ಬಿದ್ದಿದ್ದ ಎಮ್ಮೆ ರಕ್ಷಣೆ
ಬಾವಿಗೆ ಬಿದ್ದಿದ್ದ ಎಮ್ಮೆ ರಕ್ಷಣೆ   

ಚಿಕ್ಕೋಡಿ: ತಾಲ್ಲೂಕಿನ ನಾಗರಾಳ ಗ್ರಾಮದಲ್ಲಿ ಕಾಲು ಜಾರಿ ಆಳವಾದ ಬಾವಿಗೆ ಬಿದ್ದಿದ್ದ ಎಮ್ಮೆವೊಂದನ್ನು ಇಲ್ಲಿನ ಅಗ್ನಿ ಶಾಮಕದಳ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

ತಾಲ್ಲೂನ ನಾಗರಾಳ ಗ್ರಾಮದ ಮಾರ್ತಂಡ ಧಮಕೆ ಅವರಿಗೆ ಸೇರಿದ ಎಮ್ಮೆ ಇದಾಗಿತ್ತು. ಅವರ ತೋಟದಲ್ಲಿ ಮರಕ್ಕೆ ಕಟ್ಟಿ ಹಾಕಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಆಳವಾದ ಬಾವಿಗೆ ಬಿದ್ದಿತ್ತು.

ಎಮ್ಮೆ ರಕ್ಷಣೆ ಮಾಡುವಂತೆ ಮಾಲಿಕ ಅಗ್ನಿಶಾಮಕ ದಳದವರಿಗೆ ಕರೆ ಮಾಡಿದಾಗ ಸ್ಥಳಕ್ಕೆ ದೌಡಾಯಿಸಿ ಸ್ಥಳೀಯರ ಸಹಕಾರದೊಂದಿಗೆ ಎಮ್ಮೆಯನ್ನು ರಕ್ಷಣೆ ಮಾಡಿದ್ದಾರೆ.

ADVERTISEMENT

ಅಗ್ನಿಶಾಮಕ ಪ್ರಭಾರಿ ಅಧಿಕಾರಿ ರಾಜೇಂದ್ರ ಪಾಟೀಲ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ನಾಗಪ್ಪ ಪಾಟೀಲ, ಮನೋಹರ ಬೀಳಮರಿ, ದುಂಡಪ್ಪ ಬಾಡಕರ, ಬಾಬು ಗೌರಾಜ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.