ADVERTISEMENT

ಚರ್ಮಶ್ರೀ ಪ್ರಶಸ್ತಿ: ಮಾರುತಿ ಭಂಡಾರೆ ಆಯ್ಕೆ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2019, 14:27 IST
Last Updated 17 ಮಾರ್ಚ್ 2019, 14:27 IST
ಮಾರುತಿ ಭಂಡಾರೆ
ಮಾರುತಿ ಭಂಡಾರೆ   

ಬೆಳಗಾವಿ: ಕರ್ನಾಟಕ ಲೆದರ್ ಆರ್ಟಿಜನ್ಸ್ ಸಂಸ್ಥೆಯಿಂದ ಕೊಡಮಾಡುವ ‘ಚರ್ಮಶ್ರೀ ಪ್ರಶಸ್ತಿ’ಗೆ ಅಥಣಿ ತಾಲ್ಲೂಕು ಮದಭಾವಿ ಗ್ರಾಮದ ಮಾರುತಿ ಭಂಡಾರೆ ಅವರನ್ನು ಆಯ್ಕೆ ಮಾಡಲಾಗಿದೆ.

ಮಾರ್ಚ್‌ 24ರಂದು ಸಂಜೆ 5ಕ್ಕೆ ಶಹಾಪುರದ ನಾಥ ಪೈ ವೃತ್ತ ಸಮೀಪದ ಲೋಕಪ್ರಿಯ ಜನಸೇವಾ ಸಂಸ್ಥೆ ಆವರಣದಲ್ಲಿ ನಡೆಯುವ ಸಂಸ್ಥೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT