ADVERTISEMENT

ಐವರು ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 14 ಜೂನ್ 2025, 16:19 IST
Last Updated 14 ಜೂನ್ 2025, 16:19 IST

ಪ್ರಜಾವಾಣಿ ವಾರ್ತೆ

ಬೆಳಗಾವಿ: ಇಲ್ಲಿನ ಟಿಳಕವಾಡಿಯ ಗೋಡ್ಸೆವಾಡಿಯಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಐವರು ಆರೋಪಿಗಳನ್ನು ಟಿಳಕವಾಡಿ ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಅಯೋಧ್ಯಾ ನಗರದ ವಿನಾಯಕ ಕೊಲ್ಲಾಪುರ(29), ಸಂದೇಶ ಗವಾಲಿ(24), ಭವಾನಿ ನಗರದ ಕುಮಾರ ಪೂಜಾರಿ(39), ರೋಹಿತ ಮುಳವೆ(30), ಸೌರಭ ಸತುಸ್ಕರ್(22) ಬಂಧಿತರು.

ADVERTISEMENT

ಅವರಿಂದ ₹14 ಸಾವಿರ ಮೌಲ್ಯದ 494 ಗ್ರಾಂ ಮಾದಕವಸ್ತು, ಕೃತ್ಯಕ್ಕೆ ಬಳಸಿದ ₹2 ಲಕ್ಷ ಮೌಲ್ಯದ ಕಾರು, ನಾಲ್ಕು ಮೊಬೈಲ್, ₹2,500 ನಗದು ವಶಕ್ಕೆ ಪಡೆಯಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.