ಬೆಳಗಾವಿ: ಇಲ್ಲಿನ ಕೆಎಲ್ಎಸ್ ಗೋಗಟೆ ತಾಂತ್ರಿಕ ಕಾಲೇಜಿನ ಪ್ರಾಚಾರ್ಯ ಡಾ.ಆನಂದ ಎಸ್. ದೇಶಪಾಂಡೆ ಅವರನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಕುಲಸಚಿವರನ್ನಾಗಿ ನೇಮಕ ಮಾಡಲಾಗಿದೆ.
ಈ ಹಿಂದೆ ಕುಲಸಚಿವರಾಗಿದ್ದ ಪ್ರೊ.ಎಚ್.ಎನ್. ಜಗನ್ನಾಥರೆಡ್ಡಿ ಅವರ ಅಧಿಕಾರದ ಅವಧಿ ಮುಗಿದಿದ್ದರಿಂದ ಹೊಸ ನೇಮಕಾತಿ ನಡೆದಿದೆ. ದೇಶಪಾಂಡೆ ಅವರ ಅಧಿಕಾರದ ಅವಧಿ 2 ವರ್ಷಗಳದ್ದಾಗಿದೆ. ಎಂ.ಟೆಕ್., ಪಿಎಚ್ಡಿ ಪದವೀಧರರಾದ ಅವರಿಗೆ 31 ವರ್ಷಗಳ ಬೋಧನೆ ಹಾಗೂ ಆಡಳಿತದ ಅನುಭವವಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.