ಅಥಣಿ: ನಾಗನೂರ ಪಿ.ಕೆ. ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ (ಪಿಕೆಪಿಎಸ್) ನಿರ್ದೇಶಕರ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ತವರೂರಿದು. ಅವರನ್ನು ಸಾಮಾನ್ಯ ಸಾಲಗಾರರ ಕ್ಷೇತ್ರದಿಂದ ಆಯ್ಕೆ ಮಾಡಲಾಗಿದೆ. ಉಳಿದಂತೆ ಹಣಮಂತ ಹುದ್ದಾರ, ಗಂಗಪ್ಪ ಬಿಳ್ಳೂರ, ರಾವಸಾಬ ಐಗಳಿ, ಮಲ್ಲಪ್ಪ ಚೌಗಲಾ, ಮಹಿಳಾ ಸಾಲಗಾರರಿಗೆ ನಿಗದಿಯಾದ ಸ್ಥಾನಕ್ಕೆಶಾಂತವ್ವ ಕರಾಳೆ, ಮಲ್ಲಮ್ಮ ಪಾಟೀಲ, ಹಿಂದುಳಿದ ವರ್ಗ ‘ಎ’ನಿಂದ ಪರಪ್ಪ ಸವದಿ, ಬಸಪ್ಪ ತೇಲಿ, ಪರಿಶಿಷ್ಟ ಜಾತಿ ಸಾಲಗಾರರ ಮೀಸಲು ಸ್ಥಾನಕ್ಕೆ ಶ್ರೀಶೈಲ ಕಾಂಬಳೆ, ಬಿನ್ ಸಾಲಗಾರರ ವಿಭಾಗದಿಂದ ರಾಮಪ್ಪ ಗುಡ್ಡೆನ್ನವರ ಆಯ್ಕೆಯಾಗಿದ್ದಾರೆ.
ಇವರಲ್ಲಿ ಅಧ್ಯಕ್ಷರನ್ನಾಗಿ ಪರಪ್ಪಾ ಸವದಿ ಹಾಗೂ ಉಪಾಧ್ಯಕ್ಷರನ್ನಾಗಿ ಹಣಮಂತ ಹುದ್ದಾರ ಆಯ್ಕೆಯೂ ಅವಿರೋಧವಾಗಿ ನಡೆದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.