ಚಿಕ್ಕೋಡಿ: ತಾಲ್ಲೂಕಿನ ಯಡೂರ ಗ್ರಾಮದ ಒಂದೇ ಕುಟುಂಬದ ಮೂವರು ಕಲ್ಲೊಳ ಬಳಿ ಕೃಷ್ಣಾ ನದಿಗೆ ಹಾರಿ ಆತ್ಮಹತ್ಯೆ ಮಾಡಿ
ಕೊಂಡಿದ್ದಾರೆ. ಅಶೋಕ ಕಾಂಬಳೆ(70), ಪತ್ನಿ ನಿರ್ಮಲಾ ಅಶೋಕ ಕಾಂಬಳೆ (60) ಹಾಗೂ ಪುತ್ರ ಅರುಣ ಅಶೋಕ ಕಾಂಬಳೆ(40) ಆತ್ಮಹತ್ಯೆ ಮಾಡಿಕೊಂಡವರು.
ಎರಡು ದಿನಗಳ ಹಿಂದೆ ಮನೆಗೆ ಬೀಗ ಹಾಕಿಕೊಂಡು ಇವರು ಹೊರ ಹೋಗಿದ್ದರು. ಯಡೂರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ₹1.75 ಲಕ್ಷ ಹಾಗೂ ಇನ್ನೆರಡು ಹಣಕಾಸು ಸಂಸ್ಥೆಗಳಿಂದ ₹1.29 ಲಕ್ಷ ಸಾಲ ಪಡೆದಿದ್ದರು ಎಂದು ತಿಳಿದು ಬಂದಿದೆ. ಮೃತ ಅಶೋಕ ಕಾಂಬಳೆ ಪುತ್ರಿಗೀತಾ ಅವರು ಅಂಕಲಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.