ಕಾಗವಾಡ: ತಾಲ್ಲೂಕಿನ ಹಲವು ಕಡೆ ಸೋಮವಾರ ಸಂಜೆ ಮುಂಗಾರು ಮಳೆ ಒಂದು ಗಂಟೆಗಳ ಕಾಲ ಘಾಳಿ ಮಳೆ ಸುರಿಯಿತು. ಕಳೆದ ಒಂದು ವಾರಗಳಿಂದ ಬಿಡುವು ನೀಡಿದ್ದ ಮಳೆ ಸೋಮವಾರ ಸಂಜೆ ಮೋಳೆ, ಕವಲಗುಡ್ಡ, ಐನಾಪೂರ, ಉಗಾರ ಬುದ್ರುಕ್, ಶಿರಗಯ,ಮಂಗಸೂಳಿ, ಶೇಡಬಾಳ, ಗ್ರಾಮಗಳಲ್ಲಿ ಒಂದು ಗಂಟೆಗಳ ಕಾಲ ಸುರಿದಿದೆ.
ಕೆಲವೆಡೆ ಮರಗಳ ಕೊಂಬೆಗಳು ನೆಲಕ್ಕೆ ಉರುಳಿವೆ. ರಸ್ತೆಯ ಮೇಲೆ ಮಳೆಯ ನೀರು ಹರಿಯುತ್ತಿದ್ದ ಕಾರಣ ವಾಹನ ಸವಾರರು ಪರದಾಡುವಂತಾಯಿತು. ಕೃಷಿ ಚಟುವಟಿಕೆಯಲ್ಲಿ ತೊಡಗಿ ಬಿತ್ತನೆ ಮಡಿರುವ ರೈತರ ಮೊಗದಲ್ಲಿ ತಂತಸ ತರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.