ADVERTISEMENT

ಜಲಾಶಯಗಳಿಂದ ನೀರು ಹೊರಕ್ಕೆ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2025, 2:37 IST
Last Updated 19 ಆಗಸ್ಟ್ 2025, 2:37 IST
ಹುಕ್ಕೇರಿ ತಾಲ್ಲೂಕಿನ ಹಿಡಕಲ್‌ ಬಳಿಯ ಘಟಪ್ರಭಾ ಜಲಾಶಯಯದಿಂದ 20,800 ಕ್ಯೂಸೆಕ್ ನೀರನ್ನು ಸೋಮವಾರ ನದಿಗೆ ಬಿಡಲಾಯಿತು
ಹುಕ್ಕೇರಿ ತಾಲ್ಲೂಕಿನ ಹಿಡಕಲ್‌ ಬಳಿಯ ಘಟಪ್ರಭಾ ಜಲಾಶಯಯದಿಂದ 20,800 ಕ್ಯೂಸೆಕ್ ನೀರನ್ನು ಸೋಮವಾರ ನದಿಗೆ ಬಿಡಲಾಯಿತು   

ಹುಕ್ಕೇರಿ: ಹಿಡಕಲ್‌ ನದಿಪಾತ್ರದಲ್ಲಿ ಸತತ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತಾಲ್ಲೂಕಿನಲ್ಲಿರುವ ನದಿಯ ಎರಡೂ ಜಲಾಶಯಗಳಿಂದ ಸೋಮವಾರ ನೀರು ಹೊರಗೆ ಬಿಡಲಾಯಿತು. ರಾಜಾ ಲಖಮಗೌಡ ಜಲಾಶಯದಿಂದ (ಹಿಡಕಲ್ ಡ್ಯಾಂ) 20,800 ಕ್ಯುಸೆಕ್ ನೀರು ಹಾಗೂ ಶಿರೂರ್ ಜಲಾಶಯದಿಂದ 2,300 ಕ್ಯುಸೆಕ್ ನೀರನ್ನು ಸೋಮವಾರ ನದಿಗೆ ಬಿಡಲಾಯಿತು.

ಹಿಡಕಲ್‌ ಜಲಾಶಯವು ಬಹುತೇಕ ಭರ್ತಿಯಾಗಿದ್ದು, ಸೋಮವಾರ ಜಲಾಶಯದ ನೀರಿನ ಮಟ್ಟ 2174.967 ಅಡಿ ಇದ್ದ (ಗರಿಷ್ಠ ಮಟ್ಟ 2175 ಅಡಿ) ಒಳಹರಿವು ಸಂಜೆ ಹೊತ್ತಿಗೆ 25,000 ಕ್ಯುಸೆಕ್ ಇದೆ. 18,000  ಕ್ಯುಸೆಕ್ ನೀರನ್ನು ನದಿಗೆ ಮತ್ತು 2,800 ಕ್ಯುಸೆಕ್ ನೀರನ್ನು ಕೆಪಿಸಿ ವಿದ್ಯುತ್‌ಗಾರದ ಮೂಲಕ ನದಿಗೆ ನೀರು ಬಿಡಲಾಗಿದೆ ಎಂದು ಎಇಇ ಜಗದೀಶ್ ಬಿ.ಕೆ.ತಿಳಿಸಿದ್ದಾರೆ.

ಶಿರೂರ್ ಡ್ಯಾಂ: ಮಾರ್ಕಂಡೇಯ ನದಿಗೆ ಅಡ್ಡಲಾಗಿ ಶಿರೂರ್ ಬಳಿ ನಿರ್ಮಿಸಿರುವ ಜಲಾಶಯದಲ್ಲಿ ಸೋಮವಾರ ಗರಿಷ್ಠ ಮಟ್ಟ 3.69 ಟಿಎಂಸಿ ಪೈಕಿ 3.67 ಟಿಎಂಸಿ ನೀರು ತುಂಬಿದೆ. ಸಂಜೆಯ ಹೊತ್ತಿಗೆ ಒಳಹರಿವು 2300 ಕ್ಯುಸೆಕ್ ಇದ್ದು, ಹೊರ ಹರಿವು 2300 ಕ್ಯುಸೆಕ್ ಇತ್ತು.

ADVERTISEMENT

ಅದರಲ್ಲಿ ಬಲದಂಡೆ ಕಾಲುವೆಗೆ 60ಕ್ಯುಸೆಕ್, ನದಿಗೆ 1500 ಕ್ಯುಸೆಕ್ ಮತ್ತು ಇತರೆ 339 ಕ್ಯುಸೆಕ್ ಸೇರಿ   ಒಟ್ಟು 1889 ಕ್ಯುಸೆಕ್‌ ಹೊರಬಿಡಲಾಗುತ್ತಿದೆ.

ನದಿ ತಟದ ಗ್ರಾಮಗಳಲ್ಲಿ ಸೋಮವಾರ ಡಂಗುರ ಸಾರಲಾಗಿದ್ದು, ಜನರು ತಮ್ಮ ಜಾನುವಾರ ಸಮೇತ ಸುರಕ್ಷಿತ ಸ್ಥಳಗಳಿಗೆ ಹೋಗುವಂತೆ ತಹಶೀಲ್ದಾರ್ ಬಲರಾಮ ಕಟ್ಟಿಮನಿ ಮನವಿ ಮಾಡಿದ್ದಾರೆ.

ಹುಕ್ಕೇರಿ ತಾಲ್ಲೂಕಿನ ಶಿರೂರ್ ಜಲಾಶಯಯದಿಂದ 2300 ಕ್ಯುಸೆಕ್‌ ನೀರನ್ನು ಸೋಮವಾರ ನದಿಗೆ ಬಿಡಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.