ADVERTISEMENT

ಶೌರ್ಯ ಪ್ರದರ್ಶಿಸಿದ ಬಾಲಕರಿಗೆ ಕೇಂದ್ರದಿಂದ ‘ಜೀವನ ರಕ್ಷಾ’ ಪದಕ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2020, 15:09 IST
Last Updated 6 ನವೆಂಬರ್ 2020, 15:09 IST
ಬಾಲಕನನ್ನು ‍ಪ್ರಾಣಾ‍ಪಾಯದಿಂದ ರಕ್ಷಿಸಿದ ಗೋಕಾಕ ತಾಲ್ಲೂಕಿನ ವಡೇರಹಟ್ಟಿಯ ಬಾಲಕರಾದ ಸಿದ್ದಪ್ಪ ಕೆಂಪಣ್ಣ ಹೊಸಟ್ಟಿ ಮತ್ತು ಶಿವಾನಂದ ದಶರಥ ಹೊಸಟ್ಟಿ ಅವರಿಗೆ ಕೇಂದ್ರ ಗೃಹ ಸಚಿವಾಲಯ ಕೊಡಮಾಡಿದ ‘ಜೀವನ ರಕ್ಷಾ’ ಪದಕ, ತಲಾ ₹ 1 ಲಕ್ಷ ಚೆಕ್ ಮತ್ತು ಪ್ರಮಾಣಪತ್ರವನ್ನು ಪೊಲೀಸ್ ಅಧಿಕಾರಿಗಳು ಶುಕ್ರವಾರ ನೀಡಿ ಪುರಸ್ಕರಿಸಿದರು
ಬಾಲಕನನ್ನು ‍ಪ್ರಾಣಾ‍ಪಾಯದಿಂದ ರಕ್ಷಿಸಿದ ಗೋಕಾಕ ತಾಲ್ಲೂಕಿನ ವಡೇರಹಟ್ಟಿಯ ಬಾಲಕರಾದ ಸಿದ್ದಪ್ಪ ಕೆಂಪಣ್ಣ ಹೊಸಟ್ಟಿ ಮತ್ತು ಶಿವಾನಂದ ದಶರಥ ಹೊಸಟ್ಟಿ ಅವರಿಗೆ ಕೇಂದ್ರ ಗೃಹ ಸಚಿವಾಲಯ ಕೊಡಮಾಡಿದ ‘ಜೀವನ ರಕ್ಷಾ’ ಪದಕ, ತಲಾ ₹ 1 ಲಕ್ಷ ಚೆಕ್ ಮತ್ತು ಪ್ರಮಾಣಪತ್ರವನ್ನು ಪೊಲೀಸ್ ಅಧಿಕಾರಿಗಳು ಶುಕ್ರವಾರ ನೀಡಿ ಪುರಸ್ಕರಿಸಿದರು   

ಬೆಳಗಾವಿ: ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ಬಾಲಕನನ್ನು ‍ಪ್ರಾಣಾ‍ಪಾಯದಿಂದ ರಕ್ಷಿಸಿದ ಗೋಕಾಕ ತಾಲ್ಲೂಕಿನ ವಡೇರಹಟ್ಟಿಯ ಬಾಲಕರಾದ ಸಿದ್ದಪ್ಪ ಕೆಂಪಣ್ಣ ಹೊಸಟ್ಟಿ ಮತ್ತು ಶಿವಾನಂದ ದಶರಥ ಹೊಸಟ್ಟಿ ಅವರನ್ನು ಇಲ್ಲಿನ ಪೊಲೀಸ್ ಆಯುಕ್ತರ ಕಾರ್ಯಾಲಯದಲ್ಲಿ ಶುಕ್ರವಾರ ಸನ್ಮಾನಿಸಿದ ಅಧಿಕಾರಿಗಳು, ಕೇಂದ್ರ ಗೃಹ ಸಚಿವಾಲಯದಿಂದ ಕೊಡಮಾಡಿದ ‘ಜೀವನ ರಕ್ಷಾ’ ಪದಕ, ತಲಾ ₹ 1 ಲಕ್ಷ ಚೆಕ್ ಮತ್ತು ಪ್ರಮಾಣಪತ್ರ ವಿತರಿಸಿದರು.

ಈ ಬಾಲಕರು, 2018ರ ಮೇ 8ರಂದು ಗೋಕಾಕ ತಾಲ್ಲೂಕಿನ ವಡೇರಹಟ್ಟಿ ಗ್ರಾಮದ ಇಂದ್ರವೇಣಿ ಹಳ್ಳದಲ್ಲಿ ಆಕಸ್ಮಿಕವಾಗಿ ಬಿದ್ದು ತೇಲಿ ಹೋಗುತ್ತಿದ್ದ ಬಾಲಕನ ಚೀರಾಟ ಕೇಳಿ ಕೂಡಲೇ ದಾವಿಸಿ ನೆರವಾಗಿದ್ದರು. ನೀರಿನ ರಭಸಕ್ಕೆ ಭಯ ಪಡದೆ ಹಳ್ಳಕ್ಕೆ ಹಾರಿ ಮುಳುಗುತ್ತಿದ್ದ ಬಾಲಕನನ್ನು ಪ್ರಾಣಾಪಾಯದಿಂದ ರಕ್ಷಿಸಿ ಧೈರ್ಯ–ಸಾಹಸ ಪ್ರದರ್ಶಿಸಿದ್ದರು. ಸಮಯಪ್ರಜ್ಞೆ ತೋರಿದ್ದರು. ಅವರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ 2018ರ ನ. 14ರಂದು ಹೊಯ್ಸಳ ಮತ್ತು ಕೆಳದಿ ಚನ್ನಮ್ಮ ಪ್ರಶಸ್ತಿ ನೀಡಿ ಪುರಸ್ಕರಿಸಲಾಗಿತ್ತು. ಈಗ ಕೇಂದ್ರ ಗೃಹ ಸಚಿವಾಲಯದಿಂದ ಪುರಸ್ಕರಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕೆ. ತ್ಯಾಗರಾಜನ್‌ ತಿಳಿಸಿದರು.

ಡಿಸಿಪಿ ವಿಕ್ರಮ್ ಅಮಟೆ, ಎಸಿಪಿ ನಾರಾಯಣ ಭರಮನಿ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.