ಬೆಳಗಾವಿ: ಕೆ.ಎಸ್.ಆರ್.ಪಿ. ಉತ್ಸವ ಪ್ರಯುಕ್ತ ರಾಜ್ಯ ಮೀಸಲು ಪೊಲೀಸ್ 2ನೇ ಪಡೆಯ ಬೆಳಗಾವಿ ಘಟಕದಿಂದ ಡಿ.1ರಂದು ಸಂಜೆ 7ರಿಂದ ರಾತ್ರಿ 9ರವರೆಗೆ ಮಚ್ಚೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಡಿ. 2ರಂದು ಬೆಳಿಗ್ಗೆ 7ಕ್ಕೆ ಕೆ.ಎಸ್.ಆರ್.ಪಿ. ಎಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ಸೈಕಲ್ ಜಾಥಾ ಆಯೋಜಿಸಲಾಗಿದೆ. ಕೆ.ಎಸ್.ಆರ್.ಪಿ ಬೆಳಗಾವಿ ನಗರ ಹಾಗೂ ಜಿಲ್ಲಾ ಪೊಲೀಸ್ ತರಬೇತಿ ಶಾಲೆಗಳವರು, ಸಾರ್ವಜನಿಕರು ಪಾಲ್ಗೊಳ್ಳಲಿದ್ದಾರೆ.
ಸುವರ್ಣವಿಧಾನಸೌಧದಿಂದ ಹೊರಟು ಎನ್.ಎಚ್-4 ಮಾರ್ಗವಾಗಿ ಅಶೋಕವೃತ್ತ, ಆರ್.ಟಿ.ಒ. ವೃತ್ತ, ರಾಣಿ ಚನ್ನಮ್ಮ ವೃತ್ತದಲ್ಲಿ ಮಾಲಾರ್ಪಣೆ ಮಾಡಿ, ಕಾಲೇಜು ರಸ್ತೆ, ಉದ್ಯಮಬಾಗ ರಸ್ತೆ ಹಾಗೂ ಪೀರನವಾಡಿ ಮಾರ್ಗವಾಗಿ ಮಚ್ಚೆಯಲ್ಲಿರುವ 2ನೇ ಪಡೆ ಆವರಣ ತಲುಪಲಿದೆ. ‘ಸದೃಢ ಹಾಗೂ ಆರೋಗ್ಯಕರ ಬೆಳಗಾವಿಗಾಗಿ’ ಶೀರ್ಷಿಕೆಯಲ್ಲಿ ಜಾಥಾ ನಡೆಸಲಾಗುತ್ತಿದೆ ಎಂದು ಕಮಾಂಡೆಂಟ್ ಹಂಜಾ ಹುಸೇನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿರ್ಗಮನ ಪಥಸಂಚಲನ: ಕೆಎಸ್ಆರ್ಪಿ 6ನೇ ತಂಡದ ಪುರುಷರ ವಿಶೇಷ ಮೀಸಲು ಪೊಲೀಸ್ ಕಾನ್ಸ್ಟೆಬಲ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಡಿ. 1ರಂದು ಬೆಳಿಗ್ಗೆ 8ಕ್ಕೆ ಎಪಿಎಂಸಿ ರಸ್ತೆಯಲ್ಲಿರುವ ತರಬೇತಿ ಶಾಲೆ ಮೈದಾನದಲ್ಲಿ ನಡೆಯಲಿದೆ.
ಗೃಹ ಸಚಿವ ಬಸವರಾಜ ಬೊಮ್ಮಾಯಿ ಮುಖ್ಯಅತಿಥಿಯಾಗಿ ಭಾಗವಹಿಸಲಿದ್ದು, ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಪಾಲ್ಗೊಳ್ಳುವರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.