ADVERTISEMENT

ಮಳೆಯಿಂದ ಮೃತಪಟ್ಟವರ ಕುಟುಂಬಗಳಿಗೆ ಲಕ್ಷ್ಮಿ ಹೆಬ್ಬಾಳ್ಕರ್ ಸಾಂತ್ವನ

​ಪ್ರಜಾವಾಣಿ ವಾರ್ತೆ
Published 11 ಮೇ 2020, 11:49 IST
Last Updated 11 ಮೇ 2020, 11:49 IST
ಬೆಳಗಾವಿ ತಾಲ್ಲೂಕಿನ ಕಮಕಾರಟ್ಟಿಯಲ್ಲಿ ಗೋಡೆ ಕುಸಿದು ಮೃತರಾದವರ ಕುಟುಂಬದವರಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಸೋಮವಾರ ಸಾಂತ್ವನ ಹೇಳಿದರು
ಬೆಳಗಾವಿ ತಾಲ್ಲೂಕಿನ ಕಮಕಾರಟ್ಟಿಯಲ್ಲಿ ಗೋಡೆ ಕುಸಿದು ಮೃತರಾದವರ ಕುಟುಂಬದವರಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಸೋಮವಾರ ಸಾಂತ್ವನ ಹೇಳಿದರು   

ಬೆಳಗಾವಿ: ಭಾನುವಾರ ಸುರಿದ ಮಳೆಯಿಂದಾಗಿ ತಾಲ್ಲೂಕಿನ ಕಮಕಾರಟ್ಟಿ ಗ್ರಾಮದಲ್ಲಿ ಗೋಡೆ ಕುಸಿದು ಮೃತಪಟ್ಟಿರುವ ಇಬ್ಬರ ಕುಟುಂಬದವರನ್ನು ಸೋಮವಾರ ಭೇಟಿಯಾದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಸಾಂತ್ವನ ಹೇಳುವ ಜೊತೆಗೆ ಧನಸಹಾಯ ಮಾಡಿದರು.

ಕೊಂಡಸಕೊಪ್ಪದ ಕಲ್ಲಪ್ಪ ಸಿ. ಸಾಂಬ್ರೆಕರ್ (45) ಹಾಗೂ ಶಿಂದೋಳಿಯ ನಿವಾಸಿ ಪರಶುರಾಮ ಗ. ಶಹಪೂರಕರ (17) ಆಡುಗಳನ್ನು ಮೇಯಿಸುವ ಸಲುವಾಗಿ ಕಮಕಾರಟ್ಟಿ ಹೋಗಿದ್ದರು. ಮಧ್ಯಾಹ್ನ ಸುರಿದ ಭಾರಿ ಮಳೆಯಿಂದ ರಕ್ಷಿಸಿಕೊಳ್ಳಲು ಹೊಲದಲ್ಲಿನ ಶೆಡ್ ಹತ್ತಿರ ಹೋಗಿದ್ದಾರೆ. ಮಣ್ಣಿನಿಂದ ನಿರ್ಮಿಸಿದ ಗೋಡೆ ಅವರ ಮೇಲೆ ಕುಸಿದು ಬಿದ್ದ ಕಾರಣ ಮೃತರಾಗಿದ್ದಾರೆ.

ಸುದ್ದಿ ತಿಳಿದ ಲಕ್ಷ್ಮಿ ಮೃತರ ಮನೆಗಳಿಗೆ ತೆರಳಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಸರ್ಕಾರದಿಂದ ಸಾಧ್ಯವಾದಷ್ಟು ಆರ್ಥಿಕ ನೆರವು ಕೊಡಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.