ಚಿಕ್ಕೋಡಿ: ‘ತಂದೆ-ತಾಯಿ, ಗುರುವಿನ ಋಣ ಎಂದಿಗೂ ಮರೆಯಲು ಸಾಧ್ಯವಿಲ್ಲ. ಪ್ರತಿಯೊಬ್ಬರೂ ಸರಳ ಸಾತ್ವಿಕ ಜೀವನ ನಡೆಸಿ ಆದರ್ಶಪ್ರಾಯರಾಗಬೇಕು. ಹಾಗಾದಲ್ಲಿ ಮಾತ್ರ ಸುಭದ್ರ ಸಮಾಜ ಕಟ್ಟಲು ಸಾಧ್ಯ’ ಎಂದು ಜೊಲ್ಲೆ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ, ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.
ತಾಲ್ಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜೊಲ್ಲೆ ಶಿಕ್ಷಣ ಸಂಸ್ಥೆಯ ಬಸವಜ್ಯೋತಿ ಪದವಿ ಮಹಾವಿದ್ಯಾಲಯ, ಮೌಲಾನಾ ಅಬುಲ್ ಕಲಾಂ ಅಜಾದ್ ಬಿಎಸ್ಡಬ್ಲು/ಎಂಎಸ್ಡಬ್ಲು ಮಹಾವಿದ್ಯಾಲಯದ 204-25ನೇ ಸಾಲಿನ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
‘ನಮ್ಮ ಜೀವನ ಸರಳವಾಗಿರಬೇಕು. ಸರಳ ಜೀವನದಿಂದ ಬದುಕು ಸುಂದರವಾಗಿರುತ್ತದೆ. ಸುಂದರ ಬದುಕಿನಿಂದ ನೆಮ್ಮದಿಯು ಮನೆ ಮಾಡುತ್ತದೆ. ನೆಮ್ಮದಿಯಾಗಿದ್ದರೆ ಏನನ್ನಾದರೂ ಸಾಧಿಸಲು ಸಾಧ್ಯವಾಗುತ್ತದೆ’ ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.
ಮಹಾವಿದ್ಯಾಲಯದ ಪ್ರಾಚಾರ್ಯ ಅಪ್ಪಾಸಾಹೇಬ ಅಕ್ಕೋಳೆ, ದೈಹಿಕ ಶಿಕ್ಷಣ ಪ್ರಾಧ್ಯಾಪಕ ತೋಂಬರೆ, ಪ್ರಿಯಾ ಭೋಜೆ, ಎಂ.ಎಂ.ಪಾಟೀಲ, ಮಿಥುನ ಅಂಕಲಿ, ಎಂ.ಎಂ.ಪೂಜಾರಿ, ರಾಕೇಶ ಮಗದುಮ್ಮ, ರವಿ ಕುರಬೆಟ್ಟ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.