ADVERTISEMENT

ಸಹೋದರರ ಕಲಹ: ಕೊಲೆಯಲ್ಲಿ ಅಂತ್ಯ

​ಪ್ರಜಾವಾಣಿ ವಾರ್ತೆ
Published 17 ಮೇ 2022, 3:56 IST
Last Updated 17 ಮೇ 2022, 3:56 IST

ಗೋಕಾಕ: ಬುದ್ಧಿ ಮಾತು ಹೇಳಿದ ಸಹೋದರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಭಾನುವಾರ ರಾತ್ರಿ ನಗರದ ಕಿಲ್ಲೆಯ ಮನೆಯೊಂದರಲ್ಲಿ ನಡೆದಿದೆ. ಮುನಾಫ್ ರಫೀಕ್ ದೇಸಾಯಿ (24) ಕೊಲೆಯಾದವರು. ಮುನಾಫ್‌ ಅವರ ಹಿರಿಯ ಸಹೋದರ ರಮಜಾನ್ ರಫೀಕ್ ದೇಸಾಯಿ ಆರೋಪಿ.

ಕುಟುಂಬದ ಸದಸ್ಯರೊಂದಿಗೆ ರಾತ್ರಿ ಊಟ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ. ‘ನನಗಿಂತ ಕಿರಿಯ ನೀನು ನನಗೇ ಬುದ್ಧಿ ಹೇಳುವೆಯಾ‘ ಎಂದು ಜಗಳ ತೆಗೆದಿದ್ದಾನೆ, ಇದು ವಿಕೋಪಕ್ಕೆ ಹೋದಾಗ ಇರಿದಿದ್ದಾನೆ ಎನ್ನಲಾಗಿದೆ. ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.