ಪ್ರಜಾವಾಣಿ ವಾರ್ತೆ
ಗೋಕಾಕ: ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆಯನ್ನು ಖಂಡಿಸಿ ಇಲ್ಲಿನ ನಾಗರಿಕ ಹಿತರಕ್ಷಣಾ ವೇದಿಕೆ ಹಾಗೂ ಹಿಂದೂಪರ ಸಂಘಟನೆಗಳ ಒಕ್ಕೂಟಗಳ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಬಸವೇಶ್ವರ ವೃತ್ತದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಡಾ.ಸಂಜಯ ಹೋಸಮಠ, ನಾರಾಯಣ ಮಠಾಧಿಕಾರಿ, ಆನಂದ ಪಾಟೀಲ, ಸದಾಶಿವ ಗುದಗಗೋಳ, ಡಾ.ಮಹಾಂತೇಶ ಕಡಾಡಿ, ಅನುಪಾ ಕೌಶಿಕ, ರಜನಿ ಜಿರಗ್ಯಾಳ, ಮಲ್ಲಿಕಾರ್ಜುನ ಚುನಮರಿ, ಚಂದ್ರಶೇಖರ್ ಕೊಣ್ಣೂರ, ಪ್ರಮೋದ್ ಜೋಶಿ, ಎಸ್.ವಿ.ದೇಮಶೆಟ್ಟಿ, ಸಿದ್ಲಿಂಗಪ್ಪ ದಳವಾಯಿ, ಬಸವರಾಜ ಫಡತಾರೆ, ಪ್ರಕಾಶ ರಾಠೋಡ, ನರೇಂದ್ರ ಪರಮಾರ, ರಮೇಶ ಉಟಗಿ, ಮಹಾಂತೇಶ ತಾವಂಶಿ, ಸೋಮಶೇಖರ್ ಮಗದುಮ್ಮ, ಸಿ.ಜಿ.ಕೌಜಲಗಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.